Bigg Boss Kannada Finalist: ಬಿಗ್ಬಾಸ್ ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ನಡೆದಿದೆ.. ಫಿನಾಲೆಗೆ ಸೆಲೆಕ್ಟ್ ಆದ ಮೂರು ಸ್ಪರ್ಧಿಗಳನ್ನು ಹೊರತುಪಡಿಸಿ ಇಬ್ಬರನ್ನು ಮನೆಯಿಂದ ಹೊರಕಳಿಸಲಾಗಿದೆ.. ಇದೀಗ ಗ್ಯ್ರಾಂಡ್ ಫಿನಾಲೆಗೆ ಎಂಟ್ರಿಕೊಡುವ ಮತ್ತೊಬ್ಬ ಸ್ಪರ್ಧಿಯ ಹೆಸರು ಲೀಕ್ ಆಗಿದೆ..
ಬಿಗ್ಬಾಸ್ ಮನೆಯಿಂದ ಡಬಲ್ ಎಲಿಮಿನೇಷನ್ನಲ್ಲಿ ಗೌತಮಿ ಮತ್ತು ಧನರಾಜ್ ಹೊರಗೆ ಹೋಗಿದ್ದಾರೆ ಎಂದು ವರದಿಯಾಗಿದೆ.. ಮೂರು ಸ್ಪರ್ಧಿಗಳು ಈಗಾಗಲೇ ಫಿನಾಲೆ ಪ್ರವೇಶ ಪಡೆದುಕೊಂಡಿದ್ದಾರೆ. ಇವರನ್ನು ಹೊರತುಪಡಿಸಿ ಭವ್ಯ, ಮಂಜು, ರಜತ್ ಈ ಮೂವರಲ್ಲಿ ಯಾರು ಫಿನಾಲೆಗೆ ಎಂಟ್ರಿಕೊಡಲಿದ್ದಾರೆ ಎನ್ನುವ ಗುಸುಗುಸು ಇದೀಗ ಶುರುವಾಗಿದೆ..
ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಮಿಡ್ವೀಕ್ ಎಲಿಮಿನೇಷನ್ ಘೋಷಣೆ ಮಾಡಲಾಗಿತ್ತು.. ಆದರೆ ಕಾರಣಾಂತರಳಿಂದ ಎಲಿಮಿನೇಷನ್ ರದ್ದಾಯಿತು.. ಇದರಿಂದ ಈ ವಾರಾಂತ್ಯದಲ್ಲಿ ಇಬ್ಬರು ಹೊರಹೋಗುವ ಅನಿವಾರ್ಯತೆ ಎದುರಾಯಿತು.. ಇದರಿಂದ ಎಲ್ಲರ ಲೆಕ್ಕಾಚಾರ ತಲೆಕೆಳಗಾಯಿತು.. ಫಿನಾಲೆಗೆ ಎಂಟ್ರಿ ಕೊಡ್ತಾರೆ ಎಂದುಕೊಂಡಿದ್ದ ಧನರಾಜ್ ಮಾಡಿದ ಒಂದೇ ಒಂದು ತಪ್ಪಿನಿಂದ ಮನೆಯಿಂದಲೇ ಹೊರಹೋದರು..
ಉಳಿದ ಆರು ಜನರಲ್ಲಿ ಈಗಾಗಲೇ ಮೂರು ಜನ ಎಂದರೇ ತ್ರಿವಿಕ್ರಮ್, ಹನುಮಂತ, ಮೋಕ್ಷಿತಾ ಫಿನಾಲೆ ತಲುಪಿದ್ದಾರೆ.. ಅದರಂತೆ ಭವ್ಯ, ಮಂಜು, ರಜತ್ ಈ ಮೂವರಲ್ಲಿ ಯಾರು ಫಿನಾಲೆಗೆ ಪ್ರವೇಶ ಪಡೆಯಲಿದ್ದಾರೆ ಎನ್ನುವುದು ಈಗಿನ ಕುತೂಹಲದ ವಿಷಯವಾಗಿದೆ..
ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಭವ್ಯ ಫಿನಾಲೆ ಪ್ರವೇಶ ಪಡೆಯಬಹುದು ಎನ್ನಲಾಗಿದೆ.. ಏಕೆಂದರೇ ಉಳಿದ ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೇ ಭವ್ಯ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟಂಟ್ ಎಂದೇ ಹೇಳಲಾಗುತ್ತದೆ.. ಹೀಗಾಗಿ ಅವರೇ ಮುಂದಿನ ಫಿನಾಲೆ ಸ್ಪರ್ಧಿ ಎಂದು ವರದಿಯಾಗಿದೆ..
ಒಂದು ವೇಳೆ ಭವ್ಯ ಫಿನಾಲೆಗೆ ಎಂಟ್ರಿ ಕೊಟ್ಟರೇ ಮಂಜು, ರಜತ್ ಇಬ್ಬರಲ್ಲಿ ಯಾರಾದರೂ ಒಬ್ಬರು ಮನೆಯಿಂದ ಹೊರಹೋಗುತ್ತಾರೆ.. ಏಕೆಂದರೇ ಫಿನಾಲೆಗೆ ಕೇಲ ಟಾಪ್ 5 ಸ್ಪರ್ಧಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ..
ಇಷ್ಟೇ ಅಲ್ಲದೇ ನಿನ್ನೆಯ ಸಂಚಿಕೆಯಲ್ಲಿ ಬಿಗ್ಬಾಸ್ ವಿನ್ನರ್ ಪಡೆಯುವ ಕಪ್ ಸಹ ಅನಾವರಣವಾಗಿದೆ.. ಸದ್ಯ ಈ ಕಪ್ ಯಾರ ಪಾಲಾಗುತ್ತದೆ ಎನ್ನುವ ಕುತೂಹಲ ಎಲ್ಲರಿಗೂ ಇದೆ.. ಇದಕ್ಕಾಗಿ ನಾವು ಫಿನಾಲೆ ವಾರದ ವರೆಗೂ ಕಾಯಲೇಬೇಕಿದೆ..