ಇಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಟದ ಮೈದಾನದಲ್ಲಿ ಉಭಯದೇಶಗಳ ಆಟಗಾರರ ನಡುವೆ ನಡೆದ ಐತಿಹಾಸಿಕ ಫೈಟ್ ಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
2010 ರ ಏಷ್ಯಾ ಕಪ್ನಲ್ಲಿ, ಗಂಭೀರ್ ಮತ್ತು ಅಕ್ಮಲ್ ನಡುವೆ ಕ್ಯಾಚ್ ವಿಚಾರವಾಗಿ ಮಾತಿನ ಚಕಮಕಿ ನಡೆಯಿತು ನಂತರ ಎಂಎಸ್ ಧೋನಿ ಮತ್ತು ಅಂಪೈರ್ಗಳು ಪರಿಸ್ಥಿತಿಯನ್ನು ಶಾಂತಗೊಳಿಸಿದರು.
2012 ರ ಟಿ20 ಪಂದ್ಯವೊಂದರಲ್ಲಿ, ಅಕ್ಮಲ್ ಚೆಂಡು ಕೈತಪ್ಪಿದ ನಂತರ ಇಶಾಂತ್ ಶರ್ಮಾ ಮತ್ತು ಕಮ್ರಾನ್ ಅಕ್ಮಲ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.ನಂತರ ಅಂಪೈರ್ಗಳು ಮತ್ತು ಇತರ ಆಟಗಾರರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
೨೦೧೦ ರ ಏಷ್ಯಾ ಕಪ್ನಲ್ಲಿ, ಹರ್ಭಜನ್ ಸಿಂಗ್ ಶೋಯೆಬ್ ಅಖ್ತರ್ ಎಸೆತದಲ್ಲಿ ನಿರ್ಣಾಯಕ ಸಿಕ್ಸರ್ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.ಇದು ಮಾತಿನ ಚಕಮಕಿಗೆ ಕಾರಣವಾಯಿತು.
2007 ರ ಏಕದಿನ ಪಂದ್ಯದಲ್ಲಿ, ಗಂಭೀರ್ ಅಫ್ರಿದಿ ಬೌಂಡರಿ ಬಾರಿಸಿದ ನಂತರ ಗಂಭೀರ್ ಮತ್ತು ಅಫ್ರಿದಿ ನಡುವೆ ಘರ್ಷಣೆ ನಡೆಯಿತು.ಗಂಭೀರ್ ಸಿಂಗಲ್ ಪಡೆಯಲು ಓಡುವಾಗ ಅಫ್ರಿದಿಗೆ ಡಿಕ್ಕಿ ಹೊಡೆದಾಗ ಅಂಪೈರ್ ಮಧ್ಯಸ್ಥಿಕೆ ಅಗತ್ಯವಾಗಿದ್ದರಿಂದ ವಾಗ್ವಾದ ಉಲ್ಬಣಗೊಂಡಿತು.
1996 ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಆಮೀರ್ ಸೊಹೈಲ್ ಬೌಂಡರಿ ಹೊಡೆದ ನಂತರ ವೆಂಕಟೇಶ್ ಪ್ರಸಾದ್ ಕಡೆಗೆ ಪ್ರಚೋದನಕಾರಿಯಾಗಿ ಸನ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟೇಶ್ ಪ್ರಸಾದ್, ಮುಂದಿನ ಎಸೆತದಲ್ಲಿ ಸೊಹೈಲ್ ಅವರನ್ನು ಔಟ್ ಮಾಡಿದರು.
೧೯೯೨ ರ ವಿಶ್ವಕಪ್ನಲ್ಲಿ, ಭಾರತದ ವಿಕೆಟ್ ಕೀಪರ್ ಕಿರಣ್ ಮೋರೆ ಅವರ ಅತಿಯಾದ ಅಪೀಲ್ ಗಳು ಪಾಕಿಸ್ತಾನಿ ಬ್ಯಾಟ್ಸ್ಮನ್ ಜಾವೇದ್ ಮಿಯಾಂದಾದ್ ಅವರನ್ನು ಕೆರಳಿಸಿತು, ನಂತರ ಮಿಯಾಂದಾದ್ ವಿಚಿತ್ರವಾಗಿ ಜಿಗಿಯುವುದರ ಮೂಲಕ ಮೋರೆ ಅವರನ್ನು ಅಣಕಿಸಿದರು.