Karnataka Assembly Elections : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪ ಎಂದಿದ್ದಾರೆ. ಮನೆ ಕೊಟ್ಟ, ಅಕ್ಕಿ ನೀಡಿದ, ಶೌಚಾಲಯ ಕೊಟ್ಟ, ಭಾರತವನ್ನು ಅಭಿವೃದ್ಧಿಗೊಳಿಸುತ್ತಿರುವ ಪ್ರಧಾನಿ ಮೋದಿ ವಿಷ ಸರ್ಪವೇ..?
ಚುನಾವಣೆ ಯಾವಾಗಲೂ ಕೇವಲ ಒಂದೇ ವಿಷಯದ ಮೇಲೆ ಕೇಂದ್ರಿತವಾಗಿರುವುದಿಲ್ಲ, ಇದರಲ್ಲಿ ಹಲವು ಅಂಶಗಳು ಮೇಳೈಸಿರುತ್ತವೆ.ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳು ಕೂಡ ಇವುಗಳ ಲೆಕ್ಕಾಚಾರದ ಮೇಲೆಯೇ ಜನರನ್ನು ತಲುಪುವ ಬಗೆಯನ್ನು ಮತ್ತು ತನ್ನ ಚುನಾವಣಾ ಪ್ರಚಾರದ ವೈಖರಿಯನ್ನು ನಿರ್ಧರಿಸುತ್ತವೆ.
ಬಿಜೆಪಿ ಪಕ್ಷವು ಆರಂಭದಿಂದಲೂ ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಅನುಕೂಲಕರವಾಗಲಿದೆ ಎನ್ನುವ ಅಭಿಪ್ರಾಯವನ್ನು ಹೇಳುತ್ತಲೇ ಬಂದಿದೆ. ಇದೆ ಮಾತಿನಂತೆ ಅದು ಈ ಬಾರಿಯ ಚುನಾವಣಾ ಪ್ರಚಾರದಲ್ಲಿಯೂ ಡಬಲ್ ಇಂಜಿನ್ ಸರ್ಕಾರದಿಂದ ಪ್ರಗತಿ ತ್ವರಿತಗತಿಯಲ್ಲಿ ಸಾಗಲಿದೆ ಎನ್ನುವುದು ಸ್ಪಷ್ಟವಾದಂತಹ ವಾದವಾಗಿದೆ.
Karnataka Assembly Election 2023: ಪ್ರಧಾನಿ ಮೋದಿಯವರು ವರ್ಚುವಲ್ ಸಭೆ ಮಾಡಿ 50 ಲಕ್ಷ ಜನರ ಜೊತೆ ಸಭೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಚುನಾವಣಾ ಆಯೋಗದ ನೀತಿ ಸಂಹಿತೆ ಏನು ಹೇಳುತ್ತದೆ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
Karnataka Assembly Election 2023: ಮುಸಲ್ಮಾನರಿಗೆ ನಮ್ಮ ಬಿಜೆಪಿ ಸರ್ಕಾರ ಮಿಸಲಾತಿ ರದ್ದುಪಡಿಸಲಾಯಿತು, ಆದರೆ ಕಾಂಗ್ರೆಸ್ ನವಋ ಮುಸ್ಲಿಂ ರ ಮಿಸಲಾತಿ ಮತ್ತೆ ಮರಳಿ ಕೊಡ್ತೆವೆ ಅಂತಿದ್ದಾರೆ. ಕಾಂಗ್ರೆಸ್ ನವರು ದಲಿತರಿಗಾಗಿ , ಬಡವರಿಗಾಗಿ ಏನು ಮಾಡಿದ್ದಾರೆ. ಅವರ ಜೀವನ ರೂಪಿಸುವುದಕ್ಕೆ ಏನು ಮಾಡಿದ್ದಾರೆ ಅನ್ನೊದು ದೇಶದ ಜನರ ಪ್ರಶ್ನೆಯಾಗಿದೆ. ಬಿಜೆಪಿ ಸರ್ಕಾರ ಬಡವರಿಗಾಗಿ ಮನೆ, ರೈತನಿಧಿ, ಹೆಣ್ಣು ಮಕ್ಕಳಿಗೆ, ಶಿಕ್ಷಣಕ್ಕಾಗಿ ನಾವು ದುಡಿಯುತ್ತಿದ್ದೇವೆ ಎಂದರು.
ಸಿಎಂ ತವರು ಜಿಲ್ಲೆ ಹಾವೇರಿಗೆ ಇಂದು ಅಮಿತ್ ಶಾ ಎಂಟ್ರಿ. ರಾಹುಲ್ ಮತಬೇಟೆ ಬೆನ್ನಲ್ಲೇ ಅಮಿತ್ ಶಾ ಹಾನಗಲ್ ಪ್ರವಾಸ. ಇಂದು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ʻಶಾʼ ಕ್ಯಾಂಪೇನ್. ಬಿಜೆಪಿ ಭದ್ರಕೋಟೆ ಹಾನಗಲ್ ತಾಲೂಕಿನಲ್ಲಿ 'ಶಾ' ಮತಬೇಟೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.