ಬೆಂಗಳೂರು: ಕೇಂದ್ರ ಸರ್ಕಾರವು ಸ್ವಾಯತ್ತ ಸಂಸ್ಥೆಗಳ ದುರುಪಯೋಗಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್-ಜೆಡಿಎಸ್ ನಾಯಕರು ಈಗ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಬಿಜೆಪಿಯೇತರ ಸರ್ಕಾರ/ ಪಕ್ಷಗಳ ವಿರುದ್ಧ CBI, IT, ED ಗಳನ್ನು ಚುನಾವಣಾ ಅಸ್ತ್ರಗಗಳಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸ್ವಾಯತ್ತ ಸಂಸ್ಥೆಗಳ ದುರುಪಯೋಗ ಪಡಿಸಿಕೊಳ್ಳುತ್ತಿದೆ.ಇದಕ್ಕೆ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಉಭಯ ಪಕ್ಷಗಳ ನಾಯಕರು ಮೋದಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ತೆರಿಗೆ ವಂಚಕರ ವಿರುದ್ದ ನಿಯಮಿತವಾಗಿ ತನಿಖೆಗಳನ್ನು ಮಾಡಲು ನಮ್ಮ ಯಾವುದೇ ತಕಾರಿರಲ್ಲ.
ಆದರೆ ಚುನಾವಣೆಯ ಉದ್ದೇಶದಿಂದ ಐಟಿ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಇದರಿಂದ ಮೋದಿಯವರಿಗೆ ಸಂವಿಧಾನದ ಮೌಲ್ಯಗಳಲ್ಲಿ ನಂಬಿಕೆಯಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. @siddaramaiah #ITRaid #KarnatakaPolitics pic.twitter.com/kXvGE4tw2U
— Karnataka Congress (@INCKarnataka) March 28, 2019
ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ" ನರೇಂದ್ರ ಮೋದಿಯವರ ನಿಜವಾದ ಸರ್ಜಿಕಲ್ ಸ್ಟ್ರೈಕ್ ಈಗ ಐಟಿ ರೇಡ್ ಮೂಲಕ ಮಾಡಲಾಗುತ್ತಿದೆ. ಐಟಿ ಅಧಿಕಾರಿ ಬಾಲಕೃಷ್ಣ ಅವರಿಗೆ ನೀಡಿರುವ ಸಂವಿಧಾನಿಕ ಹುದ್ದೆಯನ್ನು ಪ್ರಧಾನಿ ಮೋದಿ ತಮ್ಮ ದ್ವೇಷ ಸಾಧಿಸಲು ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ "ಕಾಂಗ್ರೆಸ್ ಪಕ್ಷವೂ ಸಹ 70 ವರ್ಷಗಳಿಂದ ಅಧಿಕಾರದಲ್ಲಿತ್ತು.ಆದರೆ ಎಂದಿಗೂ ಸಹ ಕಾಂಗ್ರೆಸ್ ಪಕ್ಷವು ಚುನಾವಣಾ ಸಂದರ್ಭದಲ್ಲಿ ದಾಳಿಗಳನ್ನು ಮಾಡಿಲ್ಲ. ಈ ರೀತಿಯಾಗಿ ದುರುದ್ದೇಶದ ರಾಜಕೀಯವನ್ನು ಯಾವುದೇ ಸರ್ಕಾರಗಳು ಮಾಡಬಾರದು.ಕೇಂದ್ರ ಸರ್ಕಾರದ ದುರುದ್ದೇಶದ ರಾಜಕೀಯ ನೀತಿಗಳ ವಿರುದ್ಧ ನರೇಂದ್ರ ಮೋದಿ ಯವರಿಗೆ ಎಚ್ಚರಿಕೆಯನ್ನು ನೀಡುವುದಕ್ಕೋಸ್ಕರ ಮೈತ್ರಿ ಸರ್ಕಾರದ ನಾಯಕರಾದ ನಾವು ಈ ದಿನ ದೃಢವಾಗಿ ನಿರ್ಧರಿಸಿದ್ದೇವೆ."ಎಂದರು.
PM @narendramodi's real surgical strike is out in the open through IT dept raids. The constitutional post offer for IT officer Balakrishna helped the PM in his revenge game. Highly deplorable to use govt machinery, corrupt officials to harrass opponents during election time.
— H D Kumaraswamy (@hd_kumaraswamy) March 28, 2019
ಉಪ ಮುಖ್ಯಮಂತ್ರಿ ಪರಮೇಶ್ವರ್ ಮಾತನಾಡಿ "ಪ್ರಧಾನಿ ಮಂತ್ರಿಯವರು ಅನೇಕ ರಾಜ್ಯಗಳಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಚುನಾವಣೆಯಲ್ಲಿ ಯಾರೇ ಗೆಲ್ಲಬಹುದು ಸೋಲಬಹುದು.ಆದರೆ ದೇಶದ ಆಂತರಿಕ ವ್ಯವಸ್ಥೆಯನ್ನು ಹಾಳು ಮಾಡುವ ಕೆಲಸವನ್ನು ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.