ಹೆಂಡ್ತಿ ಕಾಟಕ್ಕೆ ಬೇಸತ್ತು ರ್ಯಾಪರ್ ಆತ್ಮಹತ್ಯೆ : ಈ ಸೈಟಲ್ಲಿ ವಿಷ ಆರ್ಡರ್ ಮಾಡಿದ್ದ

ಒಡಿಸ್ಸಾದ ರ್ಯಾಪರ್ ಅಭಿನವ್ ಆತ್ಮಹತ್ಯೆ ಕೇಸ್‌ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ತನಿಖೆಯಲ್ಲಿ ಕೆಲ ಅಂಶಗಳು ಬಯಲಾಗಿದ್ದು, ನೀವು ಈ ಸ್ಟೋರಿ ನೋಡಿದ್ರೆ ಟೆಕ್ಕಿ ಅತುಲ್ ಸುಭಾಷ್ ನೆನಪಿಗೆ ಬರ್ತಾನೆ. ಹಾಗಾದ್ರೆ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದ್ದೇನೂ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

Written by - Krishna N K | Last Updated : Feb 14, 2025, 02:25 PM IST
    • ಒಡಿಸ್ಸಾದ ರ್ಯಾಪರ್ ಅಭಿನವ್ ಆತ್ಮಹತ್ಯೆ ಕೇಸ್‌ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ.
    • ಟೆಕ್ಕ ಅತುಲ್ ಸುಭಾಷ್ ನಂತೆ ಹೆಂಡ್ತಿ ಕಾಟದಿಂದ ಅಭಿವನ್ ಸುಸೈಡ್..!?
    • ಅಮೆಜಾನ್ ನಲ್ಲಿ ವಿಷ ಆರ್ಡರ್ ಮಾಡಿದ್ದ ರ್ಯಾಪರ್
ಹೆಂಡ್ತಿ ಕಾಟಕ್ಕೆ ಬೇಸತ್ತು ರ್ಯಾಪರ್ ಆತ್ಮಹತ್ಯೆ : ಈ ಸೈಟಲ್ಲಿ ವಿಷ ಆರ್ಡರ್ ಮಾಡಿದ್ದ title=

ಬೆಂಗಳೂರು : ನಗರದ ಕಾಡುಬೀಸನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ನಾಲ್ಕು ದಿನಗಳ ಹಿಂದೆ ಒಡಿಶಾ ಮೂಲದ ಜನಪ್ರಿಯ ರ‍್ಯಾಪರ್ ಅಭಿನವ್‌ ಸಿಂಗ್‌ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಮಾರತ್‌ಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆದರೆ ಪೊಲೀಸರ ತನಿಖೆಯಲ್ಲಿ ಒಂದೊಂದೆ ಅಂಶಗಳು ಹೊರಗೆ ಬರುತ್ತಿದ್ದು, ಸಾವಿಗೆ ನಿಖರ ಕಾರಣ ಏನೂ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಯೆಸ್.. ಅದು ದೇಶಾದ್ಯಂತ ಸದ್ದು ಮಾಡಿದ್ದ ಪ್ರಕರಣ. ಟೆಕ್ಕಿ ಅತುಲ್ ಸುಭಾಷ್ ವಿಡಿಯೋ ಮೂಲಕ ತನ್ನ ಹೆಂಡತಿ, ಮತ್ತಾಕೆಯ ಕುಟುಂಬಸ್ಥರು ನೀಡಿದ ಟಾರ್ಚರ್ ಬಗ್ಗೆ ಎಳೆಎಳೆಯಾಗಿ ವಿವರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸದ್ಯ ಇಂತಹದೇ ಕಾರಣಕ್ಕೆ ರ್ಯಾಪರ್ ಅಭಿನವ್ ಸಿಂಗ್ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ. ಟೆಕ್ಕಿಯಾಗಿದ್ದ ಅಭಿನವ್ ಮದುವೆಯಾದಗಿನಿಂದ ಜೀವನದಲ್ಲಿ ಯಾವುದು ಸರಿ ಇರಲಿಲ್ಲವಂತೆ. ಪತಿ ಪತ್ನಿ ನಡುವೆ ಗಲಾಟೆ ಮಾಡಿಕೊಂಡು ಬೇರೆ ಬೇರೆ ಆಗಿದ್ರು. 

ಇದನ್ನೂ ಓದಿ:ಭಾರತಕ್ಕೆ ಸುಖೋಯ್-‌57 ಫೈಟರ್‌ ಜೆಟ್‌ ನೀಡಲಿರುವ ರಷ್ಯಾ

ಈ ನಡುವೆ ಅಭಿನವ್ ವಿರುದ್ಧ ಆತನ ಪತ್ನಿ ನನ್ನ ಮೇಲೆ ಹಲ್ಲೆಯಾಗಿದೆ. ಮಾನಸಿಕ ಕಿರುಕುಳ ನೀಡಿದ್ದಾನೆ ಅಂತಾ ಒಡಿಸ್ಸಾ ದಲ್ಲಿ ಎರಡು ಕೇಸ್ ದಾಖಲು ಮಾಡಿದ್ಲು. ಬೆಂಗಳೂರಿನಿಂದ ಒಡಿಸ್ಸಾಗೆ ತೆರಳಿ ಅಭಿನವ್ ಕೇಸ್ ಸಂಬಂಧ ಹಲವು ಬಾರಿ ವಿಚಾರಣೆಗೆ ಹಾಜರಾಗಿ ಬಂದಿದ್ದ. ಇದು ಅಭಿನವ್ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿತ್ತು. ಅಂತೆಯೇ ಅಭಿನವ್ ಆತ್ಮಹತ್ಯೆಗೆ ಎರಡು ದಿನ ಮುಂಚೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಅಭಿನವ್ ಪತ್ನಿ ಮತ್ತೆ ದೂರು ನೀಡಿದ್ಲು. ಇದು ಅಭಿನವ್ ಗೆ ಸಾಕಷ್ಟು ನೋವು ತಂದಿತ್ತು. ಈ ಜಂಜಾಟವೇ ಬೇಡ. ಇದಕ್ಕೆಲ್ಲ ಆತ್ಮಹತ್ಯೆ ಒಂದೇ ಪರಿಹಾರ ಎಂದು ನಿರ್ಧರಿಸಿಬಿಟ್ಟಿದ್ದ. 
 
ಇನ್ನೂ ಆತ್ಮಹತ್ಯೆ ಮಾಡಿಕೊಳ್ಳಲು ಅಭಿನವ್ ಅಮೆಜಾನ್ ನಲ್ಲಿ ವಿಷ ಆರ್ಡರ್ ಮಾಡಿದ್ದ. ಎರಡು ದಿನ ಮನೆಯಲ್ಲಿ ವಿಷ ಇಟ್ಟುಕೊಂಡು ಕಾಯುತ್ತಿದ್ದ. ಆತ್ಮಹತ್ಯೆಗೆ ಶರಣಾಗುವ ದಿನ ಮನೆಯಲ್ಲಿ ಗೆಳೆಯನ ಜೊತೆಗೆ ಭಾರತ ಇಂಗ್ಲೆಂಡ್ ನಡುವಿನ  ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದ. ಯಾವಾಗ ಗೆಳೆಯ ರಜತ್ ಮನೆಯಿಂದ ವಾಪಸ್ಸು ಹೋದನೋ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ:ನೆಲಮಂಗಲದ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ ಅಭ್ಯರ್ಥಿ ಎನ್‌.ಗಣೇಶ್‌ ಆಯ್ಕೆ

ಸದ್ಯ ಅಭಿನವ್ ಸಾವಿಗೂ ಮುನ್ನ ಯಾವುದೇ ಡೆತ್ ನೋಟ್ ಬರೆದಿಲ್ಲ. ಆದರೆ ಆತನ ಕುಟುಂಬಸ್ಥರ ಹೇಳಿಕೆಗಳು ಆತ್ಮಹತ್ಯೆಗೆ ಕಾರಣ ಏನೂ ಎಂಬುದನ್ನು ಸಾರಿಸಾರಿ ಹೇಳುತ್ತಿದೆ. ಹೀಗಾಗಿ ಪ್ರಕರಣದ ಗಂಭೀರತೆ ಅರಿತಿರುವ ಮಾರತ್ ಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News