Roshni Walia injury : ಖ್ಯಾತ ಕಿರುತೆರೆ ನಟಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಬೈಕ್ನ ಚೈನ್ನಲ್ಲಿ ಬಟ್ಟೆ ಸಿಲುಕಿಕೊಂಡ ಪರಿಣಾಮ ತೊಡೆಗೆ ಗಂಭೀರವಾಗಿದೆ. ಇದರಿಂದ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸಧ್ಯ ನಟಿಯ ಆರೋಗ್ಯ ಸ್ಥಿತಿ ಹೇಗಿದೆ.. ಬನ್ನಿ ನೋಡೋಣ..
'ಭಾರತ್ ಕಾ ವೀರ್ ಪುತ್ರ-ಮಹಾರಾಣಾ ಪ್ರತಾಪ್' ಧಾರಾವಾಹಿ ಖ್ಯಾತಿಯ ನಟಿ ರೋಶಿನಿ ವಾಲಿಯಾ ಬಗ್ಗೆ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ.
ನಟಿ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ, ಆಕೆಯ ಉಡುಪಿನ ಒಂದು ಭಾಗ ಬೈಕಿನ ಚೈನ್ಗೆ ಸಿಲುಕಿಕೊಂಡಿದ್ದರಿಂದ ಆಕೆಯ ತೊಡೆಗೆ ಗಂಭೀರ ಗಾಯವಾಗಿದೆ.. ಈ ಘಟನೆ ಕುರಿತು ರೋಶಿನಿ ಮಾಹಿತಿ ನೀಡಿದ್ದಾರೆ.
ಅಪಘಾತದ ಬಗ್ಗೆ ರೋಶಿನಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ.. "ನನ್ನ ಡ್ರೇಸ್ ಬೈಕ್ ಟೈರ್ ಮತ್ತು ಚೈನ್ಗೆ ಸಿಲುಕಿಕೊಂಡಿತು, ಇದರಿಂದಾಗಿ ನನ್ನ ತೊಡೆಗೆ ಗಂಭೀರ ಗಾಯವಾಯಿತು.
ಇದು ತುಂಬಾ ಭಯಾನಕ ಅನುಭವವಾಗಿತ್ತು... ಎಲ್ಲರೂ ಜಾಗರೂಕರಾಗಿರಿ, ವಿಶೇಷವಾಗಿ ಬೈಕ್ನಲ್ಲಿ ಪ್ರಯಾಣಿಸುವಾಗ ಸಡಿಲವಾದ ಬಟ್ಟೆಗಳನ್ನು ಧರಿಸಬೇಡಿ ಅಂತ ನಟಿ ಸಲಹೆ ನೀಡಿದರು.
ಈ ಘಟನೆಯ ನಂತರ, ರೋಶಿನಿ ಚಿಕಿತ್ಸೆಗೆ ಒಳಗಾಗಿದ್ದಾರೆ.. ಅಲ್ಲದೆ, ಅಭಿಮಾನಿಗಳ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಎಲ್ಲರೂ ಸುರಕ್ಷಿತವಾಗಿರುವಂತೆ ಮನವಿ ಮಾಡಿದ್ದಾರೆ.
ಅಲ್ಲದೆ, ವಿಡಿಯೋ ಸಹ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ನಟಿಯ ತೊಡೆಗೆ ತುಂಬಾ ಗಂಭೀರ ಗಾಯವಾಗಿರುವುದನ್ನು ಕಾಣಬಹುದು..
ರೋಶಿನಿ ವಾಲಿಯಾ ಜನಪ್ರಿಯ ಕಾರ್ಯಕ್ರಮ 'ಭಾರತ್ ಕಾ ವೀರ್ ಪುತ್ರ: ಮಹಾರಾಣಾ ಪ್ರತಾಪ್' ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ.
'ಮೇ ಲಕ್ಷ್ಮಿ ತೇರೆ ಅಂಗನ್ ಕಿ', 'ದೇವೋನ್ ಕೆ ದೇವ್ ಮಹಾದೇವ್...', 'ಭಾರತ್ ಕಾ ವೀರ್ ಪುತ್ರ - ಮಹಾರಾಣಾ ಪ್ರತಾಪ್', 'ಯೇ ವದಾ ರಹಾ' ಸೇರಿದಂತೆ ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.