ರಾಜ್ಯದ ಮಹಿಳೆಯರೇ ಗಮನಿಸಿ ! ನಾಳೆ ನಂದಿನಿ ಹಾಲು ಮತ್ತು ಮೊಸರು ಸಿಗೋದು ಡೌಟ್ !ಕಾರಣ ಇದೇ

ನೌಕರರು ಅಧಿಕಾರಿಗಳ ಮನವಿಗೆ ಆಡಳಿತ ಮಂಡಳಿ  ಸ್ವಂದಿಸದ ಹಿನ್ನೆಲೆಯಲ್ಲಿ ಇದೀಗ ನೌಕರರು, ಅಧಿಕಾರಿಗಳು ಪ್ರತಿಭಟನೆಯಾ ಹಾದಿ ಹಿಡಿದಿದ್ದಾರೆ.   

Written by - Ranjitha R K | Last Updated : Jan 31, 2025, 12:33 PM IST
  • ಏಳನೇ ವೇತನ ಆಯೋಗ ವರದಿಯಂತೆ ವೇತನ ನೀಡುವಂತೆ ಆಗ್ರಹ
  • ಪ್ರತಿಭಟನೆಗೆ ಮುಂದಾದ ಕೆಎಂಎಫ್ ನೌಕರರು,ಅಧಿಕಾರಿಗಳು
  • ಬೇಡಿಕೆ ಈಡೇರಿಕೆಗೆ ನಾಳೆಯ ಡೆಡ್ ಲೈನ್
ರಾಜ್ಯದ ಮಹಿಳೆಯರೇ ಗಮನಿಸಿ ! ನಾಳೆ ನಂದಿನಿ ಹಾಲು ಮತ್ತು ಮೊಸರು ಸಿಗೋದು ಡೌಟ್ !ಕಾರಣ ಇದೇ title=

ಬೆಂಗಳೂರು : ಏಳನೇ ವೇತನ ಆಯೋಗ ವರದಿಯಂತೆ  ವೇತನ  ನೀಡುವಂತೆ ಆಗ್ರಹಿಸಿ  ಕೆಎಂಎಫ್  ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆಡಳಿತ ಮಂಡಳಿ ವಿರುದ್ದ ಅಧಿಕಾರಿಗಳು ಹಾಗೂ ನೌಕರರು ಸಮರಕ್ಕೆ ಇಳಿದಿದ್ದಾರೆ.   
ಇದೀಗ ನಾಳೆ  ಕೆಎಂಎಫ್ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನೌಕರರು ಅಧಿಕಾರಿಗಳು ಮುಂದಾಗಿದ್ದಾರೆ. ಇದರ ನೇರ ಪರಿಣಾಮ ಗ್ರಾಹಕರ ಮೇಲೆ ಬೀಳಲಿದೆ. 

ಏಳನೇ ವೇತನ ಆಯೋಗ ವರದಿಯಂತೆ  ವೇತನ  ನೀಡುವಂತೆ ಕೆಎಂಎಫ್  ನೌಕರರು ಮತ್ತು ಅಧಿಕಾರಿಗಳು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಆರ್ಥಿಕ ಹೊರೆ ಕಾರಣ ವೇತನ ಪರಿಷ್ಕರಣೆಗೆ ಕೆಎಂಎಫ್ ಆಡಳಿತ ಮಂಡಳಿ ಹಿಂದೇಟು ಹಾಕುತ್ತಲೇ ಬಂದಿದೆ. ನೌಕರರು ಅಧಿಕಾರಿಗಳ ಮನವಿಗೆ ಆಡಳಿತ ಮಂಡಳಿ  ಸ್ವಂದಿಸದ ಹಿನ್ನೆಲೆಯಲ್ಲಿ ಇದೀಗ ನೌಕರರು, ಅಧಿಕಾರಿಗಳು ಪ್ರತಿಭಟನೆಯಾ ಹಾದಿ ಹಿಡಿದಿದ್ದಾರೆ. 

ಇದನ್ನೂ ಓದಿ : ಅಗ್ಗ ದುಬಾರಿ ಚರ್ಚೆ ನಡುವೆ ಬಜೆಟ್ ನಲ್ಲಿ ಲಾಭವಾಗುವುದು ಆದಾಯ ತೆರಿಗೆದಾರಾರಿಗೆ !ಟ್ಯಾಕ್ಸ್ ಫ್ರೀ ಆಗುವುದು 10 ಲಕ್ಷದವರೆಗಿನ ಆದಾಯ

ಫೆ 1 ರಿಂದ ಕೆಎಂಎಫ್ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧಾರ :
 ಏಳನೇ ವೇತನ ಜಾರಿ ಮಾಡುವಂತೆ  ಅನೇಕ ತಿಂಗಳಿಂದ ಒತ್ತಡ ಹೇರಿದ್ದರೂ ತಲೆಕೆಡಿಸಿಕೊಳ್ಳದ  ಮಂಡಳಿ ವಿರುದ್ದ ನೌಕರರು ಮತ್ತು ಅಧಿಕಾರಿಗಳು ಸೆಟೆದು ನಿಂತಿದ್ದಾರೆ. ರಾಜ್ಯಾದ್ಯಂತ 7000 ಕ್ಕೂ ಹೆಚ್ಚು ಅಧಿಕಾರಿ-ನೌಕರರು ಕೆಎಂಎಫ್ ನಲ್ಲಿ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಫೆಬ್ರವರಿ 1ರವರೆಗಿನ ಡೆಡ್ ಲೈನ್ : 
ಪರಿಷ್ಕೃತ ಶ್ರೇಣಿ :ವೇತನ ಸೌಲಭ್ಯಗಳನ್ನ 2024 ಅಕ್ಟೋಬರ್ 1 ರಿಂದ ಜಾರಿಗೊಳಿಸಲು ಆದೇಶ.
ತಾಂತ್ರಿಕ ನೆಪವೊಡ್ಡಿ ಕೆಎಂಎಫ್ ಹಾಗೂ ಒಕ್ಕೂಟಗಳು ಯಥಾವತ್ ಯೋಜನೆ ಜಾರಿ ಮಾಡಲು ಹಿಂದೇಟು.
ಹೀಗಾಗಿ ಫೆ-1 ರ  ಬಳಿಕ ಕೆಎಂಎಫ್ ಚಟುವಟಿಕೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನೌಕರರ ಪ್ಲಾನ್.  
ಕೆಎಂಎಫ್ ಅಧಿಕಾರಿ ಮತ್ತು ನೌಕರರ ಸಂಘದಿಂದ ಒಮ್ಮತದ ನಿರ್ಧಾರ.

ಇದನ್ನೂ ಓದಿ : ದುಬೈಗಿಂತಲೂ ಅಗ್ಗದ ಬೆಲೆಯಲ್ಲಿ ಚಿನ್ನ ಸಿಗುವುದು ಇಲ್ಲಿ!ಬಂಗಾರದ ಮೇಲೆ ಒಂದೇ ಒಂದು ರೂ. ಟ್ಯಾಕ್ಸ್ ನೀಡಬೇಕಿಲ್ಲ, ಅಲ್ಲಿಗೆ ತೆರಳಲು ವೀಸಾದ ಅಗತ್ಯವೂ ಇಲ್ಲ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News