ಮಧುಮೇಹ ರೋಗಿಗಳು ಬೆಳಗ್ಗೆ ಈ ಬೀಜಗಳನ್ನ ಸೇವಿಸಬೇಕು; ರಕ್ತದಲ್ಲಿನ ಸಕ್ಕರೆ ಬೇಗನೆ ನಿಯಂತ್ರಣಕ್ಕೆ ಬರುತ್ತೆ!!

How to control blood sugar: ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಸಕ್ಕರೆಯನ್ನು ನಿಯಂತ್ರಿಸುವುದು ಕಷ್ಟಕರವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಎರಡು ಬೀಜಗಳ ಸೇವನೆಯು ಸಕ್ಕರೆಯನ್ನು ಸಮತೋಲನಗೊಳಿಸಲು ಮತ್ತು ಅನೇಕ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

Written by - Puttaraj K Alur | Last Updated : Feb 24, 2025, 02:07 PM IST
  • ಸೂರ್ಯಕಾಂತಿ ಮತ್ತು ಅಗಸೆ ಬೀಜ ಸೇವಿಸಿದ್ರೆ ಹೊಟ್ಟೆಯಲ್ಲಿ ನಾರಿನ ಪ್ರಮಾಣ ಹೆಚ್ಚಾಗುತ್ತದೆ
  • ಇವು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತವೆ ಮತ್ತು ಇನ್ಸುಲಿನ್ ಕೋಶಗಳನ್ನು ಹೆಚ್ಚಿಸುತ್ತವೆ
  • ದೇಹದಲ್ಲಿ ಸಕ್ಕರೆ ವೇಗವಾಗಿ ಜೀರ್ಣವಾಗುತ್ತದೆ & ಮಧುಮೇಹ ಕಾಯಿಲೆಗಳು ತಡೆಗಟ್ಟಲ್ಪಡುತ್ತವೆ
ಮಧುಮೇಹ ರೋಗಿಗಳು ಬೆಳಗ್ಗೆ ಈ ಬೀಜಗಳನ್ನ ಸೇವಿಸಬೇಕು; ರಕ್ತದಲ್ಲಿನ ಸಕ್ಕರೆ ಬೇಗನೆ ನಿಯಂತ್ರಣಕ್ಕೆ ಬರುತ್ತೆ!! title=
ಮಧುಮೇಹಕ್ಕೆ ʼಈʼ ಬೀಜಗಳನ್ನ ಸೇವಿಸಿ

Which seeds are good for diabetics?: ಮಧುಮೇಹದಲ್ಲಿ ಸಕ್ಕರೆಯ ಚಯಾಪಚಯ ಕ್ರಿಯೆಯು ತೊಂದರೆಗೊಳಗಾಗುತ್ತದೆ ಮತ್ತು ದೇಹವು ಸಕ್ಕರೆಯನ್ನ ಜೀರ್ಣಿಸಿಕೊಳ್ಳುವ ಬದಲು ಅದನ್ನು ರಕ್ತದಲ್ಲಿ ಬೆರೆಸಲು ಪ್ರಾರಂಭಿಸುತ್ತದೆ. ಇದರಿಂದ ಸಕ್ಕರೆ ರಕ್ತದ ಮೂಲಕ ಎಲ್ಲಾ ಅಂಗಗಳನ್ನು ತಲುಪುತ್ತದೆ ಮತ್ತು ಹೃದಯ, ಲಿವರ್‌ ಮತ್ತು ಕಿಡ್ನಿಗಳಂತಹ ಅಂಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆದ್ದರಿಂದ ಮಧುಮೇಹದಲ್ಲಿ ನಿಮ್ಮ ಆಹಾರಕ್ರಮವನ್ನು ಸುಧಾರಿಸಬೇಕು. ಉತ್ತಮ ಆಹಾರ ಪದ್ಧತಿಯಿಂದ ಮಾತ್ರ ಈ ರೋಗವನ್ನು ನಿಯಂತ್ರಿಸಬಹುದು.

ಉತ್ತಮ ಆಹಾರ ಪದ್ಧತಿಯ ಜೊತೆಗೆ ನೀವು ಬೆಳಗ್ಗೆ ಉಪಾಹಾರದಲ್ಲಿ ಸೂರ್ಯಕಾಂತಿ ಬೀಜಗಳು ಮತ್ತು ಅಗಸೆ ಬೀಜಗಳನ್ನು ಸೇವಿಸಬೇಕು. ಈ ಎರಡೂ ಬೀಜಗಳನ್ನು ಸೇವಿಸುವುದರಿಂದ ಚಯಾಪಚಯ ದರ ಹೆಚ್ಚಾಗುತ್ತದೆ ಮತ್ತು ಇನ್ಸುಲಿನ್ ಬಿಡುಗಡೆಯನ್ನು ವೇಗಗೊಳಿಸುತ್ತದೆ. ಹಾಗಾದರೆ ಈ ಬೀಜಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಹೇಗೆ ಪ್ರಯೋಜನಕಾರಿ ಮತ್ತು ಅವುಗಳನ್ನು ಹೇಗೆ ಸೇವಿಸಬೇಕು? ಎಂದು ತಿಳಿಯಿರಿ...  

ಇದನ್ನೂ ಓದಿHair Tips: ಬಿಳಿ ಕೂದಲು, ಬೋಳು ತಲೆ ಸಮಸ್ಯೆಯಿಂದ ಪಾರಾಗಲು ಈರುಳ್ಳಿಯನ್ನು ಬಳಸಿ..! ನಿಮ್ಮ ಈ ಸಮಸ್ಯೆಗಳು ತಕ್ಷಣ ನಿವಾರಣೆಯಾಗುತ್ತವೆ..!

ಮಧುಮೇಹಕ್ಕೆ ಈ ಬೀಜಗಳು ಹೇಗೆ ಪ್ರಯೋಜನಕಾರಿ? 

ಸೂರ್ಯಕಾಂತಿ ಬೀಜಗಳು ಮತ್ತು ಅಗಸೆ ಬೀಜಗಳನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ನಾರಿನ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಇನ್ಸುಲಿನ್ ಕೋಶಗಳನ್ನು ಹೆಚ್ಚಿಸುತ್ತದೆ ಮತ್ತು ಸಕ್ಕರೆ ಚಯಾಪಚಯವನ್ನು ವೇಗಗೊಳಿಸುತ್ತದೆ. ಇದರಿಂದ ದೇಹದಲ್ಲಿ ಸಕ್ಕರೆ ವೇಗವಾಗಿ ಜೀರ್ಣವಾಗುತ್ತದೆ ಮತ್ತು ಮಧುಮೇಹ ಕಾಯಿಲೆಗಳು ತಡೆಗಟ್ಟಲ್ಪಡುತ್ತವೆ. ಇದಲ್ಲದೆ ಇವೆರಡರಲ್ಲಿರುವ ಉತ್ಕರ್ಷಣ ನಿರೋಧಕಗಳು ಮಧುಮೇಹವನ್ನು ನಿಯಂತ್ರಿಸಲು ಮತ್ತು ಇನ್ಸುಲಿನ್‌ನ ಸರಿಯಾದ ಕಾರ್ಯನಿರ್ವಹಣೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಬೀಜಗಳ ಗ್ಲೈಸೆಮಿಕ್ ಸೂಚ್ಯಂಕವೂ ಕಡಿಮೆಯಾಗಿದ್ದು, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.

ಯಾವಾಗ ಮತ್ತು ಹೇಗೆ ಸೇವಿಸಬೇಕು?

ಸೂರ್ಯಕಾಂತಿ ಮತ್ತು ಅಗಸೆ ಬೀಜಗಳನ್ನು ನೆನಸಿ ತಿನ್ನಬೇಕು. ಸೂರ್ಯಕಾಂತಿ ಮತ್ತು ಅಗಸೆ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಎದ್ದಾಗ ಅವುಗಳನ್ನು ಚೆನ್ನಾಗಿ ಅಗಿದು ನೀರನ್ನು ಸಹ ಕುಡಿಯಿರಿ. ಇದಲ್ಲದೆ ನೀವು ಈ ಬೀಜಗಳನ್ನು ನೀರಿನೊಂದಿಗೆ ಪುಡಿಮಾಡಿ ರಸವನ್ನು ತಯಾರಿಸಿ ಸಹ ಕುಡಿಯಬಹುದು. ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸಬೇಕು. ವಾರದಲ್ಲಿ 3 ದಿನಗಳು ಅಥವಾ 2 ವಾರಗಳವರೆಗೆ ನಿರಂತರವಾಗಿ ಮಾಡಬೇಕು. ಹೀಗೆ ಮಾಡುವುದರಿಂದ ಸಕ್ಕರೆಯನ್ನು ನಿಯಂತ್ರಿಸಲು ಮತ್ತು ನಂತರ ಇನ್ಸುಲಿನ್ ಕೋಶಗಳನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮಗೆ ಮಧುಮೇಹ ಇದ್ದರೆ ಖಂಡಿತವಾಗಿಯೂ ಈ ಎರಡು ಬೀಜಗಳನ್ನು ಸೇವಿಸಲು ಪ್ರಯತ್ನಿಸಿರಿ.

ಇದನ್ನೂ ಓದಿಮಧುಮೇಹ ರೋಗಿಗಳಿಗೆ ಗುಡ್ ನ್ಯೂಸ್..!ಇನ್ನು ನೀವು ನಿಮ್ಮ ಕಾಯಿಲೆ ಬಗ್ಗೆ ಹೆಚ್ಚು ಚಿಂತಿಸುವಂತಿಲ್ಲ...!

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News