ಧಾರವಾಡ: ಧಾರವಾಡದ ನೇಮಿರಾಜರಣದಿವೆ ತಮ್ಮ ವೈಯಕ್ತಿಕ ಕೆಲಸಕ್ಕಾಗಿ ರೂ. 62,000- ಕೊಟ್ಟು ಹುಬ್ಬಳ್ಳಿಯ ನ್ಯೂ ಸಿ.ಟಿ. ಅಟೋಕನ್ಸ್ಲ್ಟಂಟ್ರವರಿಂದ ದ್ವಿ ಚಕ್ರ ವಾಹನ ಖರೀದಿಸಿದ್ದರು.
ಆ ವಾಹನ ಅರವಿಂದಕುಮಾರರವರಿಗೆ ಸೇರಿತ್ತು. ಅದನ್ನು ದೂರುದಾರ ನ್ಯೂ ಸಿ.ಟಿ. ಅಟೋಕನ್ಸ್ಲ್ಟಂಟ್ರವರ ಉಸ್ತುವಾರಿಯಲ್ಲಿ ಖರೀದಿಸಿದ್ದರು. ಅದಕ್ಕೆ ದೂರುದಾರ ಅವರಿಗೆ ರೂ.5,500 ಕಮೀಷನ್ ಸಹ ಕೊಟ್ಟಿದ್ದರು. ಆ ವಾಹನದ ನೋಂದಣಿಯನ್ನು ನ್ಯೂ ಸಿ.ಟಿ. ಅಟೋಕನ್ಸ್ಲ್ಟಂಟ್ರವರು ದೂರುದಾರರ ಹೆಸರಿಗೆ ಮಾಡಿಸಿಕೊಡಬೇಕು ಅಂತಾಕರಾರು ಇತ್ತು. ಆ ವಾಹನದ ಮಾಲೀಕ ಆರ್.ಟಿ.ಓ ಕಚೇರಿಯಎಲ್ಲ ದಾಖಲೆಗಳಿಗೆ ಸಹಿ ಮಾಡಿಕೊಟ್ಟರೂ ಅಟೋ ಕನ್ಸ್ಲ್ಟಂಟ್ರವರು ನೋಂದಣಿ ವರ್ಗಾವಣೆ ಮಾಡಿರಲಿಲ್ಲ. ಈ ಬಗ್ಗೆ ದೂರುದಾರ ಹಲವು ಬಾರಿ ವಿನಂತಿಸಿ ಕೋರಿಕೊಂಡರೂ ಅಟೋಕನ್ಸ್ಲ್ಟಂಟ್ರವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಂತಹ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರ ಅಟೋ ಕನ್ಸ್ಲ್ಟಂಟ್ರವರ ಮೇಲೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ಕೊಡಿಸುವಂತೆ ದೂರುದಾರರು ಗ್ರಾಹಕರ ರಕ್ಷಣಾ ಕಾಯ್ದೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:12/06/2024ಕ್ಕೆ ದೂರನ್ನು ಸಲ್ಲಿಸಿದ್ದರು.
ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ಸಾಹಿತಿಗಳು.. ಕಲಾವಿದರ ಪ್ರತಿಭಟನೆ
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು.ಸಿ.ಹಿರೇಮಠ ಸದಸ್ಯರು, ದೂರುದಾರರು ಲಗತ್ತಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ ದೂರುದಾರರು ರೂ.62,000/-ಹಣ ವಾಹನದ ಮಾಲೀಕ ಅರವಿಂದಕುಮಾರರವರಿಗೆ ಕೊಟ್ಟು ಅವರಿಂದ ಎಲ್ಲ ದಾಖಲೆಗಳಿಗೆ ಸಹಿ ಪಡೆದಿದ್ದಾರೆ. ಮದ್ಯವರ್ತಿಯಾದ ಹುಬ್ಬಳ್ಳಿಯ ನ್ಯೂ ಸಿ.ಟಿ. ಅಟೋ ಕನ್ಸ್ಲ್ಟಂಟ್ರವರಿಗೆ ರೂ.5,500/- ಕಮೀಷನ್ ಸಹ ದೂರುದಾರ ಕೊಟ್ಟಿದ್ದಾನೆ. ಅವರ ಮದ್ಯ ಆದ ಒಪ್ಪಂದದ ಪ್ರಕಾರ ಅಟೋ ಕನ್ಸ್ಲ್ಟಂಟ್ರವರು ದೂರುದಾರರ ಹೆಸರಿಗೆ ಆ ವಾಹನದ ನೋಂದಣಿ ಬದಲಾಯಿಸಿ ಕೊಡುವುದು ಅವರ ಕರ್ತವ್ಯವಾಗಿದೆ. ಆದರೆ ವಾಹನದ ನೋಂದಣಿಯ ಬಗ್ಗೆ ದೂರುದಾರ ಹಲವುಬಾರಿ ವಿನಂತಿಸಿದರೂ ಅಟೋ ಕನ್ಸ್ಲ್ಟಂಟ್ರವರು ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಹಕ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.
ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಎದುರುದಾರ ಹುಬ್ಬಳ್ಳಿಯ ನ್ಯೂ ಸಿ.ಟಿ. ಅಟೋ ಕನ್ಸ್ಲ್ಟಂಟ್ದೂರುದಾರರ ಹೆಸರಿಗೆ ಆ ವಾಹನದ ನೋಂದಣಿ ಬದಲಾವಣೆ ಮಾಡಿಸಿಕೊಡಬೇಕು ಮತ್ತು ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.50 ಸಾವಿರ ಪರಿಹಾರ ಮತ್ತು ರೂ.10 ಸಾವಿರ ಪ್ರಕರಣದ ಖರ್ಚು ಕೊಡಬೇಕು ಅಂತಾ ಆಯೋಗ ಆದೇಶಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.