ಸಿಬಿಐ ಕಣ್ಣಿಗೆ ಬಟ್ಟೆ ಕಟ್ಟಿದ ರಾಜ್ಯ ಸರ್ಕಾರ, ಮುಡಾ ನಡೆ ನಿಗೂಢ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೂಡ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಸಿ.ಬಿ.ಐ ರಾಜ್ಯದಲ್ಲಿ ಮುಕ್ತ ಅವಕಾಶವಿದ್ದುದನ್ನು ಹಿಂಪಡೆಯಲಾಗಿದೆ.

Written by - Prashobh Devanahalli | Edited by - Manjunath N | Last Updated : Sep 26, 2024, 06:47 PM IST
  • ಊಸರವಳ್ಳಿ ಕಾಂಗ್ರೆಸ್ ಸರ್ಕಾರ”ದ ಭ್ರಷ್ಟಾಚಾರ ಮುಚ್ಚಿಕೊಳ್ಳುವ “ಕಳ್ಳಾಟ” ಶುರುವಾಗಿದೆ.
  • ನಾನು ತಪ್ಪೇ ಮಾಡಿಲ್ಲ, ಯಾರಿಗೂ ಹೆದರಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುವ ನಿಮಗೆ "ಸಿಬಿಐ" ಭಯವೇಕೆ..?
  • ಕಾಂಗ್ರೆಸ್ಸಿಗರೇ..., ಬಾಯಿ ಬಿಟ್ಟರೇ ಸಂವಿಧಾನ ಉಳಿಸುತ್ತೇವೆ, ರಕ್ಷಿಸುತ್ತೇವೆ ಎನ್ನುವುದು ಬರೀ ಬೊಗಳೆಯೇ..?
ಸಿಬಿಐ ಕಣ್ಣಿಗೆ ಬಟ್ಟೆ ಕಟ್ಟಿದ ರಾಜ್ಯ ಸರ್ಕಾರ, ಮುಡಾ ನಡೆ ನಿಗೂಢ title=
file photo

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೂಡ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಸಿ.ಬಿ.ಐ ರಾಜ್ಯದಲ್ಲಿ ಮುಕ್ತ ಅವಕಾಶವಿದ್ದುದನ್ನು ಹಿಂಪಡೆಯಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ  ಎಚ್.ಕೆ. ಪಾಟೀಲ, ಸಿ.ಬಿ.ಐ ಗೆ ಸಹಜವಾದ ಪೂರ್ವಾಗ್ರಹ ಇದೆ ಎಂಬುದು ಇತ್ತೀಚಿನ ದಿನಗಳಲ್ಲಿ ದೃಢಪಡುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸಿ.ಬಿ.ಐ ಗೆ ಯಾವುದೇ ಮುಕ್ತ ಅವಕಾಶವಿರಬಾರದೆಂದು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸಿ.ಬಿ.ಐ ಸಂಸ್ಥೆಯನ್ನು ಕೇಂದ್ರ ಸರ್ಕಾರ ರಾಜಕೀಯ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಇನ್ನು ಮುಂದೆ ಯಾವುದಾದರೂ ಪ್ರಕರಣದಲ್ಲಿ ಸಿ.ಬಿ.ಐ ಮೂಲಕ ತನಿಖೆ ನಡೆಯಬೇಕಾದರೆ ರಾಜ್ಯ ಸರ್ಕಾರದ ಒಪ್ಪಿಗೆ ಮುಖ್ಯವಾದದ್ದು ಮತ್ತು ರಾಜ್ಯದಲ್ಲಿನ ಪ್ರಕರಣಗಳನ್ನು ಪ್ರಕರಣವಾರು ಆಧಾರದ ಮೇಲೆ ತನಿಖೆ ನಡೆಸಲು ಸಿ.ಬಿ.ಐ ತನಿಖಾ ಸಂಸ್ಥೆಗೆ ಅನುಮತಿ ನೀಡಲು ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿIND vs BAN: ಕಾನ್ಪುರ ಟೆಸ್ಟ್‌ನೊಂದಿಗೆ ʼಈʼ ಲೆಜೆಂಡರಿ ಆಟಗಾರರ ವೃತ್ತಿಜೀವನ ಅಂತ್ಯ... ಮತ್ತೇ ಟೀಂ ಇಂಡಿಯಾಗೆ ಮರಳುವುದಿಲ್ಲವೇ?!  

ಈಗ ರಾಜ್ಯ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಪಕ್ಷವು ಸರಣಿ ಟ್ವೀಟ್ ಮೂಲಕ ಕಿಡಿ ಕಾರಿದೆ. “ಊಸರವಳ್ಳಿ ಕಾಂಗ್ರೆಸ್ ಸರ್ಕಾರ”ದ ಭ್ರಷ್ಟಾಚಾರ ಮುಚ್ಚಿಕೊಳ್ಳುವ “ಕಳ್ಳಾಟ” ಶುರುವಾಗಿದೆ. ನಾನು ತಪ್ಪೇ ಮಾಡಿಲ್ಲ, ಯಾರಿಗೂ ಹೆದರಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುವ ನಿಮಗೆ "ಸಿಬಿಐ" ಭಯವೇಕೆ..? ಕಾಂಗ್ರೆಸ್ಸಿಗರೇ..., ಬಾಯಿ ಬಿಟ್ಟರೇ ಸಂವಿಧಾನ ಉಳಿಸುತ್ತೇವೆ, ರಕ್ಷಿಸುತ್ತೇವೆ ಎನ್ನುವುದು ಬರೀ ಬೊಗಳೆಯೇ..? ಭ್ರಷ್ಟಾಚಾರಿ @siddaramaiah ನಿಮ್ಮ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ಹಿಂದೆ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನೇ ಕಿತ್ತುಕೊಂಡಿರಿ.. ಮುಡಾ ಪ್ರಕರಣದಲ್ಲಿ, ಮುಕ್ಕಿ ತಿಂದಿರುವ "ವೈಟ್ನರ್"ರಾಮಯ್ಯ ಹಾಗೂ ಕುಟುಂಬದ ವಿರುದ್ಧ ಸಿಬಿಐ ವಿಚಾರಣೆ ನಡೆದರೆ, ಎಲ್ಲಿ ತಮ್ಮ "ಮುಡಾ" ನಿಗೂಢ "ರಹಸ್ಯ" ಬಯಲಾಗುತ್ತೋ ಎಂಬ ಆತಂಕ ಕಾಡುತ್ತಿದೆ. ಸಿಬಿಐ ಅನ್ನು ಕಟ್ಟಿಹಾಕಲು ಹೊರಟಿರುವ @INCKarnataka ಸರ್ಕಾರದ ನಿಜಬಣ್ಣ ಬಯಲಾಗುತ್ತಿದೆ' ಎಂದು ಆಕ್ರೋಶ ವಕ್ತಪಡಿಸಿದೆ.

ಇದನ್ನೂ ಓದಿ: MUDA Scam: ಹೈಕೋರ್ಟ್ ಆದೇಶದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಇನ್ನೊಂದೆಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕೂಡ ಟ್ವೀಟ್ ಮಾಡಿ 'ಮಾನ್ಯ @siddaramaiah ನವರೇ, ಭಂಡತನದ ಎಲ್ಲೆ ಮೀರಿದ ನಿಮ್ಮ ಮಾತುಗಳಿಗೆ ಕರ್ನಾಟಕದ ಜನ ಕಿಮ್ಮತ್ತು ನೀಡುವ ಕಾಲ ಈಗ ಮುಗಿದು ಹೋಗಿದೆ. ನಿಮ್ಮ ಸ್ವಪಕ್ಷೀಯರೇ ಮುಜುಗರ ತಪ್ಪಿಸಲು ರಾಜೀನಾಮೆ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ. ಇಷ್ಟಾಗಿಯೂ ಪ್ರಧಾನಿ ಮೋದಿಯವರ ಹೆಸರು ಬಳಸಿ ತಳ ಬುಡವಿಲ್ಲದ ಹೋಲಿಕೆಗಳನ್ನು ಮಾಡಿಕೊಂಡು ರಾಜಿನಾಮೆ ನೀಡುವುದಿಲ್ಲ ಎಂಬ ವಿತಂಡ ನಿಲುವು ತಳೆದಿದ್ದೀರಿ, ಭ್ರಷ್ಟತೆಯಿಂದ ಹರಿದು ಹೋಗಿರುವ ನಿಮ್ಮ ಗೌರವಕ್ಕೆ ತೇಪೆ ಹಚ್ಚಿಕೊಂಡು ಅಧಿಕಾರಕ್ಕೆ ಜೋತು ಬೀಳುವ ಹಠಮಾರಿತನ ಪ್ರದರ್ಶಿಸುತ್ತಿದ್ದೀರಿ, ಕರ್ನಾಟಕದ ಘನತೆಯನ್ನು ಉಳಿಸುವ ದೃಷ್ಟಿಯಿಂದಲಾದರೂ ಮುಖ್ಯಮಂತ್ರಿ ಸ್ಥಾನ ತೊರೆಯಿರಿ.ತಮ್ಮ ಹಿಂಬಾಲಕರಿಂದ ಘನ ನ್ಯಾಯಾಲಯದ  ತೀರ್ಪು ಹಾಗೂ ಆದೇಶಗಳನ್ನು ರಾಜಕೀಯ ಪ್ರೇರಿತ ಎಂಬ ಹೇಳಿಕೆಗಳನ್ನು ಕೊಡಿಸಿ ನ್ಯಾಯಾಂಗ ವ್ಯವಸ್ಥೆಯನ್ನು ಅವಹೇಳನ ಮಾಡಿಸುತ್ತಿದ್ದೀರಿ ಆ ಮೂಲಕ ಸಂವಿಧಾನವನ್ನು ಅಪಮಾನಿಸುತ್ತಿದ್ದೀರಿ, ಲೋಕಾಯುಕ್ತದ ಮೇಲೆ ಪ್ರಭಾವ ಬಳಸಿ FIR ಹಾಕದಂತೆ ನೋಡಿಕೊಳ್ಳುತ್ತಿದ್ದೀರಿ."ನೀವು ಚಾಪೆ ಕೆಳಗೆ ನುಸುಳುತ್ತಿದ್ದೀರಿ ಆದರೆ ಈ ನೆಲದ ಕಾನೂನಿಗೆ ರಂಗೋಲಿಯೊಳಗೆ ನುಸುಳಿಯಾದರೂ ಭ್ರಷ್ಟರಿಗೆ ಶಿಕ್ಷಿಸುವ ಸಾಮರ್ಥ್ಯವಿದೆ” ಅಂತಹ ಸಂವಿಧಾನ ರಚಿಸಿಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಕೊಡಿ. ಸಾಂವಿಧಾನಿಕ ಹುದ್ದೆ ಹಾಗೂ ಸಂವಿಧಾನಿಕ ಶಕ್ತಿಯಿಂದ ಜನರು ದಯಪಾಲಿಸಿದ ಪ್ರಜಾತಂತ್ರ ವ್ಯವಸ್ಥೆಯ ಪರಮೋಚ್ಚ ಮುಖ್ಯಮಂತ್ರಿ ಸ್ಥಾನಕ್ಕೆ ನೀವು ಮೆತ್ತಿಕೊಂಡಿರುವ ಭ್ರಷ್ಟತೆಯ ಮಸಿ ಬಳಿದು ಅಪವಿತ್ರಗೊಳಿಸಿ ಐತಿಹಾಸಿಕ ಪ್ರಮಾದ ಮಾಡಬೇಡಿ, ಕ್ರಿಮಿನಲ್ ಕಳಂಕದ ಆರೋಪ ಹೊತ್ತುಕೊಂಡು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಅದರ ಘನತೆ ಕಳೆಯಬೇಡಿ ಎನ್ನುವುದು ಈ ರಾಜ್ಯದ ಜನರ ಒತ್ತಾಯವಾಗಿದೆ. ಗೋದ್ರಾ ಘಟನೆ ಇತಿಹಾಸದಲ್ಲಿ ಮುಗಿದ ಅಧ್ಯಾಯ, ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಎಲ್ಲಾ ಆರೋಪಗಳಿಂದ ಮುಕ್ತರಾಗಿ ಭಾರತದ ಸಾರ್ವಭೌಮತೆಯ ಸಂಕೇತವಾದ ಪ್ರಧಾನಿ ಸ್ಥಾನದಲ್ಲಿ ಕುಳಿತಿದ್ದಾರೆ. ದೇಶವನ್ನು ಸಮರ್ಥವಾಗಿ ಮುನ್ನಡೆಸಿ ಮೂರನೇ ಬಾರಿಗೆ ಪ್ರಧಾನಿಯಾಗಿ ಮುಂದುವರೆದಿದ್ದಾರೆ. ಹಿಮಾಲಯ ಪರ್ವತದಂತೆ ಎತ್ತರಕ್ಕೆ ಬೆಳೆದಿರುವ ಪ್ರಧಾನಿಯವರನ್ನು ನಿಮ್ಮೊಂದಿಗೆ ಹೋಲಿಸಿಕೊಳ್ಳಬೇಡಿ ಏಕೆಂದರೆ 'ರಾಜ್ಯಪಾಲರ ನಿರ್ಧಾರವನ್ನು ಎತ್ತಿಹಿಡಿದ ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪು ಹಾಗೂ ನಿಮ್ಮ ಮೇಲೆ ಕ್ರಿಮಿನಲ್ ಸೆಕ್ಷನ್ ಗಳ ಅಡಿಯಲ್ಲಿ ಎಫ್.ಐ.ಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯವು ನೀಡಿರುವ ಆದೇಶದ ಮೂಲಕ ಆರೋಪಿತರಾದವರು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ನೀವೇ ಮೊದಲು  ಆದ್ದರಿಂದ ಅಧಿಕಾರ ಮುಖ್ಯವೋ ? ರಾಜ್ಯದ ಘನತೆ ಮುಖ್ಯವೋ ? ನೀವೇ ಇನ್ನೊಮ್ಮೆ ಯೋಚಿಸಿ, ನಿಮಗೆ ದೆಹಲಿಯ ಕೇಜ್ರಿವಾಲ್ ಮಾದರಿಯೋ?  ಕರುನಾಡಿನ ರಾಮಕೃಷ್ಣ ಹೆಗಡೆಯವರು ಮಾದರಿಯೋ?ಆಯ್ಕೆ ನಿಮಗೇ ಬಿಟ್ಟಿದ್ದು ಎಂದು ಅವರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

Trending News