ಅದೃಷ್ಟ ಬದಲಾಗಬೇಕಾದರೆ ಮನೆಯಲ್ಲಿ ಈ ಪ್ರಾಣಿ ಸಾಕಬೇಕಂತೆ ! ಸಾಕ್ಷಾತ್ ಲಕ್ಷ್ಮೀಯೇ ಮನೆಯಲ್ಲಿ ನೆಲೆ ನಿಲ್ಲುತ್ತಾಳೆಯಂತೆ !

ಕೆಲವೊಂದು  ಪ್ರಾಣಿಗಳನ್ನು ಮನೆಯಲ್ಲಿ ಸಾಕಿದರೆ ಕೂಡಾ ಮನೆಯಲ್ಲಿನ  ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ.  

Written by - Ranjitha R K | Last Updated : Feb 19, 2025, 04:56 PM IST
  • ವಾಸ್ತು ಪ್ರಕಾರ ನಡೆದುಕೊಂಡರೆ ಎಲ್ಲವೂ ಒಳಿತಾಗುವುದು ಎಂದು ಹೇಳುತ್ತಾರೆ.
  • ವಾಸ್ತುವನ್ನು ಸರಿಯಾಗಿ ಇಡಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ
  • ವಾಸ್ತು ದೋಷ ನಿವಾರಣೆಗೆ ಉಪಾಯ
ಅದೃಷ್ಟ ಬದಲಾಗಬೇಕಾದರೆ ಮನೆಯಲ್ಲಿ ಈ ಪ್ರಾಣಿ ಸಾಕಬೇಕಂತೆ ! ಸಾಕ್ಷಾತ್ ಲಕ್ಷ್ಮೀಯೇ ಮನೆಯಲ್ಲಿ ನೆಲೆ ನಿಲ್ಲುತ್ತಾಳೆಯಂತೆ !   title=

ಬೆಂಗಳೂರು : ವಾಸ್ತು ಪ್ರಕಾರ ನಡೆದುಕೊಂಡರೆ ಎಲ್ಲವೂ ಒಳಿತಾಗುವುದು ಎಂದು ಹೇಳುತ್ತಾರೆ. ಹಾಗೆಯೇ ಮನೆಯ ವಾಸ್ತುವನ್ನು ಸರಿಯಾಗಿ ಇಡಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.ಮನೆಯ ವಾಸ್ತು ದೋಷ ತೆಗೆದು ಹಾಕಲು  ಹಲವಾರು ರೀತಿಯ  ಸಸ್ಯಗಳನ್ನು ಮನೆಯ ಸುತ್ತ, ಮನೆಯ ಒಳಗೆ ನೆಡಲಾಗುತ್ತದೆ. ಆದರೆ ಕೆಲವೊಂದು  ಪ್ರಾಣಿಗಳನ್ನು ಮನೆಯಲ್ಲಿ ಸಾಕಿದರೆ ಕೂಡಾ ಮನೆಯಲ್ಲಿನ  ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ.  

ವಾಸ್ತು ದೋಷ ನಿವಾರಣೆಗೆ ಉಪಾಯ : 
ಆಮೆ : 

ವಾಸ್ತು ಪ್ರಕಾರ, ಆಮೆಯನ್ನು ಅದೃಷ್ಟದ ಸಂಕೇತವೆಂದು ಹೇಳಲಾಗುತ್ತದೆ. ಮನೆಯಲ್ಲಿ ಆಮೆ ಇಡುವುದು ಶುಭ ಎಂದು ಹೇಳಲಾಗುತ್ತದೆ. ಹೀಗೆ ಮಾಡಿದರೆ ಲಕ್ಷ್ಮೀ ದೇವಿ ಸದಾ ಮನೆಯಲ್ಲಿ ನೆಲೆಸುತ್ತಾಳೆ ಮತ್ತು ನಿಮ್ಮ ಅದೃಷ್ಟ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ.  

ಇದನ್ನೂ ಓದಿ : ಗುರು ನಕ್ಷತ್ರದಲ್ಲಿ ಬುಧನ ಸಂಚಾರ: ಈ ನಾಲ್ಕು ರಾಶಿಗಳಿಗೆ ಅದೃಷ್ಟದ ಬೆಂಬಲದೊಂದಿಗೆ ಅಪಾರ ಸಂಪತ್ತು!

ಮೀನು : 
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮೀನುಗಳನ್ನು ಇಡುವುದು ಮಂಗಳಕರ. ಮೀನನ್ನು ಸಾಕುವುದರಿಂದ ಮನೆಯ ಋಣಾತ್ಮಕ ಶಕ್ತಿ, ದಾರಿದ್ರ್ಯ ನಿವಾರಣೆಯಾಗಿ, ಧನಾತ್ಮಕ ಶಕ್ತಿ ನೆಲೆಸುತ್ತದೆ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಚಿನ್ನದ ಬಣ್ಣದ ಮೀನುಗಳನ್ನು ಸಾಕುವುದು ಶುಭ.

ಮೊಲ : 
ಇದಲ್ಲದೆ, ಮನೆಯಲ್ಲಿ ಮೊಲವನ್ನು ಸಾಕಿದರೆ ಕೂಡಾ ಶುಭ. ಮೊಲವನ್ನು ಮನೆಯ ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ, ಮನೆಯ ನಕಾರಾತ್ಮಕ ಶಕ್ತಿಯು ಕೊನೆಗೊಳ್ಳುತ್ತದೆ ಮತ್ತು ಧನಾತ್ಮಕ ಶಕ್ತಿಯು ನೆಲೆಸುತ್ತದೆ. 

ಇದನ್ನೂ ಓದಿ :  ಕಷ್ಟ ಕಳೆದು ಸುಖದ ಸುಪ್ಪತ್ತಿಗೆಯಲ್ಲಿ ತೇಲಿಸುವನು ಶನಿದೇವ !ಈ ರಾಶಿಯವರಿಗೆ ರಾಜ ವೈಭೋಗದ ಜೀವನ ಕರುಣಿಸುವನು ಶನಿ ಮಹಾತ್ಮ !ಹೆಜ್ಜೆ ಹೆಜ್ಜೆಗೂ ಜೊತೆಗಿದ್ದು ಕಾಯುವನು ಛಾಯಾಪುತ್ರ

ನಾಯಿ: 
ಜ್ಯೋತಿಷ್ಯದ ಪ್ರಕಾರ ನಾಯಿ ಪ್ರಮುಖ ಪ್ರಾಣಿ. ನಾಯಿ ಸಾಕುವುದರಿಂದ ಜೀವನದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಜಾತಕದಲ್ಲಿ ಶನಿ ಮತ್ತು ಕೇತುವನ್ನು ಬಲಪಡಿಸಲು ಕಪ್ಪು ನಾಯಿ ಮಂಗಳಕರ ಎನ್ನಲಾಗಿದೆ.  

(ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. Zee News ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News