Champions Trophy: ಚಾಂಪಿಯನ್ಸ್ ಟ್ರೋಫಿ ವೇಳೆ ಕ್ರಿಕೆಟ್ ಜಗತ್ತಿನಲ್ಲಿಆಘಾತವೊಂದು ಸಂಭವಿಸಿದೆ. ಬಿಸಿಸಿಐ ದುಃಖದ ಸುದ್ದಿಯನ್ನು ಹಂಚಿಕೊಂಡಿದ್ದು, ಮಾಜಿ ನಾಯಕ ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹೌದು, ಮಾಜಿ ಕ್ರಿಕೆಟ್ ನಾಯಕ ಮಿಲಿಂದ್ ರೇ ಅವರು ಅಕಾಲಿಕ ನಿಧನದಿಂದ ಕ್ರಿಕೆಟ್ ಜಗತ್ತಿಗೆ ಭಾರೀ ಆಘಾತ ತಂದಿದೆ. ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿರುವ ನಡುವೆಯೇ ಈ ದುಃಖಕರ ಸುದ್ದಿ ಹೊರಬಂದಿದ್ದು, BCCI ಸೇರಿದಂತೆ ಅನೇಕ ಕ್ರಿಕೆಟ್ ದಿಗ್ಗಜರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಆ ಮುದುಕ ನನ್ನ ತೊಡೆಯ ಮೇಲೆ ಕೈ ಇಟ್ಟು.. 5 ನಿಮಿಷ..', 'ಬಿಗ್ ಬಾಸ್' ಸ್ಪರ್ಧಿಗೆ ಶಾಕಿಂಗ್ ಅನುಭವ..!
ದಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ದುಃಖದ ಸುದ್ದಿಯನ್ನು ಹಂಚಿಕೊಂಡಿದೆ. ಮುಂಬೈ ತಂಡದ ಮಾಜಿ ನಾಯಕ ಮತ್ತು ಆಯ್ಕೆದಾರ ಮಿಲಿಂದ್ ರೇಗೆ ಬುಧವಾರ ಹೃದಯಾಘಾತದಿಂದ ನಿಧನರಾದರು. 76 ವರ್ಷದ ಅವರು ಕಳೆದ ಭಾನುವಾರ ಅಷ್ಟೇ 76 ವರ್ಷಕ್ಕೆ ಕಾಲಿಟ್ಟಿದ್ದರು. ರೇಗೆ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದ್ದು, ಬುಧವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ನಿಧನರಾದರು.
ಆಲ್ರೌಂಡರ್ ಆಗಿ ಆಡಿದ ರೇಗೆ, 26 ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗಿದ್ದರು. ಆದರೂ ಕೂಡ ಕ್ರಿಕೆಟ್ ಮೈದಾನಕ್ಕೆ ಮರಳಿದ್ದ ಅವರು ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ನಾಯಕರಾಗಿದ್ದರು. ಅವರು ೧೯೬೬-೬೭ ಮತ್ತು ೧೯೭೭-೭೮ರ ನಡುವೆ ೫೨ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದರು ಮತ್ತು ಅವರ ಆಫ್-ಸ್ಪಿನ್ ಬೌಲಿಂಗ್ನಿಂದ ೧೨೬ ವಿಕೆಟ್ಗಳನ್ನು ಪಡೆದರು. ಅವರು ಬ್ಯಾಟಿಂಗ್ನಲ್ಲೂ ಕೊಡುಗೆ ನೀಡಿದರು, 23.56 ರನ್ ರೇಟ್ ನಲ್ಲಿ 1,532 ರನ್ಗಳನ್ನು ಗಳಿಸಿದರು.
ಗಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ಬಾಲ್ಯದ ಸ್ನೇಹಿತ ರೇಗೆ, ಗವಾಸ್ಕರ್ ಅವರೊಂದಿಗೆ ಶಾಲಾ ಮತ್ತು ಕಾಲೇಜಿನಲ್ಲಿ ಅಧ್ಯಯನ ಮಾಡಿದವರು ಮತ್ತು ದಾದರ್ ಯೂನಿಯನ್ ಸ್ಪೋರ್ಟಿಂಗ್ ಕ್ಲಬ್ನಲ್ಲಿ ಅವರೊಂದಿಗೆ ಆಟವಾಡಿದರು. ಮುಂಬೈ ಮತ್ತು ದೇಶೀಯ ಕ್ರಿಕೆಟ್ನಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾದ ರೇಗೆ, ತಮ್ಮ ವೃತ್ತಿಜೀವನದಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದ್ದರು ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ನೊಂದಿಗೆ ಕ್ರಿಕೆಟ್ ಸಲಹೆಗಾರರಾಗಿಯೂ ಸಹ ಸಂಬಂಧ ಹೊಂದಿದ್ದರು.
ನಾಗ್ಪುರದಲ್ಲಿ ವಿದರ್ಭ ವಿರುದ್ಧ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯ ಆಡುತ್ತಿರುವ ಮುಂಬೈ ಕ್ರಿಕೆಟ್ ತಂಡ, ರೇಗೆ ಗೌರವಾರ್ಥ ಮೂರನೇ ದಿನದಂದು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕೆ ಬಂದಿತು. ಇದನ್ನೂ ಓದಿ:ಅದೃಷ್ಟ ಬದಲಾಗಬೇಕಾದರೆ ಮನೆಯಲ್ಲಿ ಈ ಪ್ರಾಣಿ ಸಾಕಬೇಕಂತೆ ! ಸಾಕ್ಷಾತ್ ಲಕ್ಷ್ಮೀಯೇ ಮನೆಯಲ್ಲಿ ನೆಲೆ ನಿಲ್ಲುತ್ತಾಳೆಯಂತೆ !
ಬಿಸಿಸಿಐ ಸಂತಾಪ
ಮುಂಬೈ ತಂಡದ ಮಾಜಿ ನಾಯಕ ಮತ್ತು ಆಯ್ಕೆದಾರ ಮಿಲಿಂದ್ ರೇಗೆ ಅವರ ನಿಧನಕ್ಕೆ ಬಿಸಿಸಿಐ ಸಂತಾಪ ಸೂಚಿಸಿದ್ದು,. ಮುಂಬೈ ಕ್ರಿಕೆಟ್ನ ಆಧಾರಸ್ತಂಭವಾಗಿದ್ದ ಅವರು ಅದರ ಬೆಳವಣಿಗೆ ಮತ್ತು ಪರಂಪರೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಬ್ಬ ವೀಕ್ಷಕ ವಿವರಣೆಕಾರನಾಗಿ ಪ್ರತಿಭೆ ಮತ್ತು ಕೊಡುಗೆಗಳ ಮೇಲಿನ ಅವರ ತೀಕ್ಷ್ಣ ನೋಟವು ಕ್ರಿಕೆಟ್ ಜಗತ್ತಿನಲ್ಲಿ ಅವರಿಗೆ ಪ್ರಶಂಸೆ ಗಳಿಸಿಕೊಟ್ಟಿತು. ಅವರ ಕುಟುಂಬ, ಸ್ನೇಹಿತರು ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಷನ್ಗೆ ಮಂಡಳಿಯು ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.