Karnataka Assembly Elections : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪ ಎಂದಿದ್ದಾರೆ. ಮನೆ ಕೊಟ್ಟ, ಅಕ್ಕಿ ನೀಡಿದ, ಶೌಚಾಲಯ ಕೊಟ್ಟ, ಭಾರತವನ್ನು ಅಭಿವೃದ್ಧಿಗೊಳಿಸುತ್ತಿರುವ ಪ್ರಧಾನಿ ಮೋದಿ ವಿಷ ಸರ್ಪವೇ..?
ಸಿಎಂ ತವರು ಜಿಲ್ಲೆ ಹಾವೇರಿಗೆ ಇಂದು ಅಮಿತ್ ಶಾ ಎಂಟ್ರಿ. ರಾಹುಲ್ ಮತಬೇಟೆ ಬೆನ್ನಲ್ಲೇ ಅಮಿತ್ ಶಾ ಹಾನಗಲ್ ಪ್ರವಾಸ. ಇಂದು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ʻಶಾʼ ಕ್ಯಾಂಪೇನ್. ಬಿಜೆಪಿ ಭದ್ರಕೋಟೆ ಹಾನಗಲ್ ತಾಲೂಕಿನಲ್ಲಿ 'ಶಾ' ಮತಬೇಟೆ.
ಇಂದು ಧಾರವಾಡ ಜಿಲ್ಲೆಗೂ ಆಗಮಿಸಲಿರುವ ಬಿಜೆಪಿ ಚಾಣಕ್ಯ. ಧಾರವಾಡಕ್ಕೆ ಭೇಟಿ ನೀಡಲಿರೋ ಕೇಂದ್ರ ಗೃಹ ಸಚಿವ ಅಮಿತ್ ಶಾ. ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕುಗಳಿಗೆ ಅಮಿತ್ ಶಾ ಭೇಟಿ. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಅಮಿತ್ ಶಾ ಭರ್ಜರಿ ಪ್ರಚಾರ. ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ್ ಮುನೇನಕೊಪ್ಪ ಪರ ಮತಯಾಚನೆ.
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಿಜೆಪಿ ಪರ ರೋಡ್ ಶೋ ನಡೆಸುತ್ತಿರುವ ವೇಳೆ ಯುವಕನೊಬ್ಬ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಫೋಟೋ ಪ್ರದರ್ಶನ ಮಾಡುತ್ತಿದ್ದ. ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರು ಯುವಕನಿಂದ ಫೋಟೋಕಿತ್ತುಕೊಂಡ ಘಟನೆ ನಡೆಯಿತು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರ ನಗರದ ಟೆಂಡರ್ ಶೋರ್ ರಸ್ತೆಯಲ್ಲಿ ಸ್ಮೃತಿ ಇರಾನಿ ರೋಡ್ ಶೋ ನಡೆಸುದ್ದ ವೇಳೆ ಈ ಘಟನೆ ನಡೆದಿದೆ.
ಜಗದೀಶ್ ಶೆಟ್ಟರ್ ಸೋಲಿಸಲು BSYಗೆ ಅಮಿತ್ ಶಾ ಟಾಸ್ಕ್. ಇಂದು ಶೆಟ್ಟರ್, ಸವದಿ ಕೋಟೆಯಲ್ಲಿ ರಾಜಾಹುಲಿ ಮತ ಶಿಕಾರಿ. ಬೆಳಗಾವಿ, ಧಾರವಾಡ ಜಿಲ್ಲೆಯಲ್ಲಿ ಯಡಿಯೂರಪ್ಪ ಪ್ರಚಾರ. ಮಾಜಿ ಸಿಎಂ, ಮಾಜಿ ಡಿಸಿಎಂ ಸೋಲಿಸಲು ಪಣ ತೊಟ್ಟಿರುವ ಬಿಜೆಪಿ. ಹುಬ್ಬಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿಎಸ್ವೈ ಮತಬೇಟೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.