ಕುರ್ಚಿಗಾಗಿ ಸಿಎಂ, ಡಿಸಿಎಂ ನಡುವಿನ ಕುರ್ಚಿ ಕಿತ್ತಾಟ ಜೋರಾಗ್ತಿದೆ. ಮೇಲ್ನೋಟಕ್ಕೆ ಕಾಣ್ದೇ ಇದ್ರೂ ಒಳಗೊಳಗೆ ತಿಕ್ಕಾಟ ಮಾತ್ರ ಮುಂದುವರಿದಿದೆ. ಆದ್ರೆ ಸಿಎಂ ಆಪ್ತರ ಟಾಕ್ ವಾರ್ ಮಾತ್ರ ಬಹಿರಂಗವಾಗೇ ಹೆಚ್ಚಾಗ್ತಿದೆ. ಕೆಪಿಸಿಸಿ ಅಧ್ಯಕ್ಷರು ಅನ್ನೋದನ್ನೂ ನೋಡ್ದೆ ಡಿಕೆಶಿ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಅತ್ತ ಸೈಲೆಂಟಾಗಿದ್ದ ಡಿಕೆಶಿ ಆಪ್ತರೂ ಕೌಂಟರ್ ಕೊಡೋಕೆ ಆರಂಭಿಸಿದ್ದಾರೆ.