ರಚ್ಚು, ರಾಕಿಂ‌ಗ್ ಸ್ಟಾರ್ ಒಟ್ಟಿಗೆ ಸೀರಿಯಲ್‌ ಮಾಡಿದ್ರಾ? ಹಾಗಾದ್ರೆ ಯಾವುದು ಆ ಧಾರಾವಾಹಿ!?

Yash and Rachita Ram: ಕನ್ನಡದ ಪೇಮಸ್‌ ನಟ ಯಶ್‌ ಕೆ ಜಿ‌ ಎಫ್‌ ಸಿನಿಮಾಂದಿಂದ ಜಗತ್‌ ಪ್ರಸಿದ್ಧಿ ಆಗಿರುವುದು ಗೊತ್ತೇ ಇದೆ.. ಅಷ್ಟೇ ಅಲ್ಲದೆ ಕನ್ನಡ ಸಿನಿರಂಗವನ್ನು ಈಡೀ ಜಗತ್ತೇ ಹಿಂತಿರುಗಿ ನೋಡುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. 

Written by - Savita M B | Last Updated : Feb 22, 2025, 12:32 PM IST
  • ನಟ ಯಶ್‌ ಮೊದಲು ನಾಟಕಗಳಲ್ಲಿ, ಧಾರವಾಹಿಗಳಲ್ಲಿ ನಟನೆಯನ್ನ ಕಲಿತವರು
  • ಕನ್ನಡದ ನಟಿ ರಚಿತಾ ರಾಮ್‌ ಕೂಡ ಇದೇ ಹಾದಿಯಲ್ಲಿ ನಾಯಕಿಯಾಗಿ ಬೆಳೆಯುತ್ತಿರುವವರು
ರಚ್ಚು, ರಾಕಿಂ‌ಗ್ ಸ್ಟಾರ್ ಒಟ್ಟಿಗೆ ಸೀರಿಯಲ್‌ ಮಾಡಿದ್ರಾ? ಹಾಗಾದ್ರೆ ಯಾವುದು ಆ ಧಾರಾವಾಹಿ!?  title=

Yash-Rachita Ram serial ನಟ ಯಶ್‌ ಮೊದಲು ನಾಟಕಗಳಲ್ಲಿ, ಧಾರವಾಹಿಗಳಲ್ಲಿ ನಟನೆಯನ್ನ ಕಲಿತು ಹಂತ ಹಂತವಾಗಿ ಸಿನಿಮಾ ರಂಗಕ್ಕೆ ಬಂದವರು. ಕನ್ನಡದ ನಟಿ ರಚಿತಾ ರಾಮ್‌ ಕೂಡ ಇದೇ ಹಾದಿಯಲ್ಲಿ ನಾಯಕಿಯಾಗಿ ಬೆಳೆಯುತ್ತಿರುವವರು. ಆದರೆ ಇವರಿಬ್ಬರು ಸೇರಿ ಮೊದಲು ಒಂದೇ ಧಾರವಾಹಿ ಮಾಡಿದ್ದರಾ? ಅನ್ನೊದು ಎಲ್ಲರನ್ನ ಆಶ್ಚರ್ಯಗೊಳಿಸಿದೆ....

ಯಶ್‌ ಧಾರಾವಾಹಿ ಮಾಡುತ್ತಿದ್ದ ಸಮಯದಲ್ಲಿನ ಹಳೇಯ  ವಿಡಿಯೋ  ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ  ಯಶ್‌ ಫ್ಯಾನ್ಸ್ ನಾನಾ ರೀತಿಯಲ್ಲಿ  ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ಯಶ್ ಅವರು ನಟಿಯೊಬ್ಬರ ಜೊತೆ ಮಾತನಾಡುವುದರ ಕುರಿತು ಇದೆ. ಈ ನಟಿ ರಚಿತಾ ರಾಮ್ ಎಂದು ಅನೇಕರು ಊಹಿಸಿದ್ದಾರೆ . ಆದರೆ  ಅವರು ರಚಿತಾ ರಾಮ್ ಅಲ್ಲ, ಅವರ ಸಹೋದರಿ ನಿತ್ಯಾ ರಾಮ್ ಎಂದು ಈ ವಿಡಿಯೋ ಬಗ್ಗೆ ಕಮೆಂಟ್ ಬಾಕ್ಸ್ನಲ್ಲಿ ಚರ್ಚಿಸಿದ್ದಾರೆ.

ಇದನ್ನೂ ಓದಿ ಗಗನಕ್ಕೇರುತ್ತಿರುವ ಬಂಗಾರದ ಬೆಲೆಯನ್ನು ಇಳಿಸಲು ಮಹತ್ವದ ನಿರ್ಧಾರ ! ದಿಟ್ಟ ತೀರ್ಮಾನದಿಂದ ಭರ್ಜರಿಯಾಗಿಯೇ ಕುಸಿಯುವುದು ಚಿನ್ನದ ಬೆಲೆ

ರಚಿತಾ ರಾಮ್  ಸಿನಿಮಾಗಳಲ್ಲಿ ಯಾವ ರೀತಿ ಫೇಮಸ್‌ ಇದ್ದಾರೋ ಅದೇ ರೀತಿ  ನಿತ್ಯಾ ರಾಮ್‌ ಧಾರಾವಾಹಿಗಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರು ಸಿನಿಮಾಗಿಂತ ಧಾರಾವಾಹಿಗಳಲ್ಲಿ ನಟಿಸಿದ್ದೇ ಹೆಚ್ಚು. ಸದ್ಯ ತಮಿಳಿನ ‘ಅಣ್ಣ’ ಹಾಗೂ ಕನ್ನಡದ ‘ಶಾಂತಿ ನಿವಾಸ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅವರು ಈ ಮೊದಲು ಯಶ್ ಜೊತೆ ಧಾರಾವಾಹಿ ಒಂದರಲ್ಲಿ ಕಾಣಿಸಿಕೊಂಡಿದ್ದ ಆ ದೃಶ್ಯಗಳನ್ನು ಈಗ ವೈರಲ್ ಆಗಿವೆ. ಆದರೆ ಅಕ್ಕಾ ತಂಗಿ ನೋಡಲು ಸ್ವಲ್ಪ ಹೋಲಿಕೆಗಳಿರುವುದರಿಂದ ನಿತ್ಯಾ ರಾಮ್ ನ್ನು ಕೆಲವರು ರಚಿತಾ ರಾಮ್ ಎಂದಿದ್ದಾರೆ.

ಸಧ್ಯಕ್ಕೆ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಮಾಡುವದರಲ್ಲಿ  ಬ್ಯುಸಿ ಆಗಿದ್ದಾರೆ.. ಈಗಾಗಲೇ ಟೀಸರ್ ರಿಲೀಸ್‌ ಆಗಿದ್ದು ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ದೊರೆತಿದೆ. ಇತ್ತೀಚೆಗೆ ಗೋವಾದಲ್ಲಿ ಸಿನಿಮಾದ ಶೂಟ್ ನಡೆದಿದ್ದು. ಈ ಚಿತ್ರದ ಬಗ್ಗೆ  ಸಾಕಷ್ಟು ನಿರೀಕ್ಷೆ ಇದೆ.  ರಚಿತಾ ರಾಮ್ ಅವರು ಇತ್ತೀಚೆಗೆ ‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ  ನಿರತರಾಗಿದ್ದಾರೆ.

ಇದನ್ನೂ ಓದಿ ಗಗನಕ್ಕೇರುತ್ತಿರುವ ಬಂಗಾರದ ಬೆಲೆಯನ್ನು ಇಳಿಸಲು ಮಹತ್ವದ ನಿರ್ಧಾರ ! ದಿಟ್ಟ ತೀರ್ಮಾನದಿಂದ ಭರ್ಜರಿಯಾಗಿಯೇ ಕುಸಿಯುವುದು ಚಿನ್ನದ ಬೆಲೆ

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News