ಓದುವಾಗ ಫೋನ್‌ ಬಳಸಬೇಡವೆಂದು ಬುದ್ಧಿವಾದ ಹೇಳಿದ ತಾಯಿ; 17 ವರ್ಷದ ಮಗಳು ಮಾಡಿದ್ದೇನು?

High school student suicide: ಓದುವಾಗ ಮೊಬೈಲ್‌ಫೋನ್‌ ಬಳಸಬೇಡವೆಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ 17 ವರ್ಷದ ಯುವತಿಯೊಬ್ಬಳು ಸೂಸೈಡ್‌ ಮಾಡಿಕೊಂಡಿದ್ದಾಳೆ. ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.

Written by - Puttaraj K Alur | Last Updated : Feb 21, 2025, 05:20 PM IST
  • ಫೋನ್‌ ಬಳಸಬೇಡವೆಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆ
  • ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ
  • ಮೊಬೈಲ್‌ ಬಿಟ್ಟು ಓದು ಎಂದಿದ್ದಕ್ಕೆ ಸೂಸೈಡ್‌ ಮಾಡಿಕೊಂಡ 17 ವರ್ಷದ ಯುವತಿ
ಓದುವಾಗ ಫೋನ್‌ ಬಳಸಬೇಡವೆಂದು ಬುದ್ಧಿವಾದ ಹೇಳಿದ ತಾಯಿ; 17 ವರ್ಷದ ಮಗಳು ಮಾಡಿದ್ದೇನು? title=
17 ವರ್ಷದ ಯುವತಿ ಆತ್ಮಹತ್ಯೆ!

Student Suicide Case: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಓದುವಾಗ ಮೊಬೈಲ್‌ ಫೋನ್‌ ಬಳಸಬೇಡವೆಂದು  ತಾಯಿ ಬುದ್ಧಿವಾದ ಹೇಳಿದ್ದಕ್ಕೆ 17 ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಲ್ಲಿಯಾ ಜಿಲ್ಲೆಯ ದುಭಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಿವರಾಂಪುರ ಮೋಹನ್ ಛಪ್ರಾ ಗ್ರಾಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. 

ನೇಣು ಬಿಗಿದುಕೊಂಡು ಆತ್ಮಹತ್ಯೆ

ಪೊಲೀಸರ ಮಾಹಿತಿ ಪ್ರಕಾರ, ಶಿವರಾಂಪುರ ಮೋಹನ್ ಛಪ್ರಾ ಗ್ರಾಮದ ವಿನೋದ್ ಪಾಂಡೆ ಅವರ 17 ವರ್ಷದ ಅಪ್ರಾಪ್ತ ಮಗಳು ಧನ್ನು ಪಾಂಡೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ದುಭಾರ್ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ (SHO) ಮಿಥಿಲೇಶ್ ಕುಮಾರ್ ಮಾತನಾಡಿದ್ದು, 'ಘಟನೆಯ ಸಮಯದಲ್ಲಿ ವಿದ್ಯಾರ್ಥಿನಿಯ ತಾಯಿ ಮಾತ್ರ ಮನೆಯಲ್ಲಿದ್ದರು' ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈಲ್ವೆ ನೇಮಕಾತಿ ಹಗರಣ: ಪ್ರತಿ ಅಭ್ಯರ್ಥಿಯಿಂದ 4-5 ಲಕ್ಷ ರೂ. ಲಂಚ ಸ್ವೀಕಾರ, ಹಲವು ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ!!

ಫೋನ್ ಬಳಸಬೇಡವೆಂದು ಬುದ್ಧಿವಾದ ಹೇಳಿದ್ದ ತಾಯಿ!

ಧನ್ನು ಮುಂಬರುವ ಪರೀಕ್ಷೆಗಳಿಗೆ ಓದುತ್ತಿದ್ದಳು. ಓದುವಾಗ ಆಕೆ ಮೊಬೈಲ್ ಫೋನ್ ಬಳಸುತ್ತಿದ್ದಳು. ಪರೀಕ್ಷೆ ಇವೆ, ಓದುವಾಗ ಫೋನ್‌ ಬಳಸಬೇಡ ಅಂತಾ ತಾಯಿ ಆಕೆಗೆ ಗದರಿಸಿದ್ದಳು. ತಾಯಿ ಬುದ್ಧಿವಾದ ಹೇಳಿದ್ದನ್ನೇ ತಪ್ಪಾಗಿ ಅರ್ಥೈಸಿಕೊಂಡ ಧನ್ನು, ತಾಯಿ ತನಗೆ ಬೈದಿದ್ದಾಳೆ ಅಂತಾ ತಿಳಿದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.  

ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆ ಆತ್ಮಹತ್ಯೆ

ಮತ್ತೊಂದೆಡೆ, ಜಿಲ್ಲೆಯಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಸುಖಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಪಯಲ್ ಗ್ರಾಮದಲ್ಲಿ ಗುರುವಾರ 65 ವರ್ಷದ ಅನಿತಾ ದೇವಿ ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರ ಪ್ರಕಾರ, ಅನಿತಾ ದೇವಿ ತನ್ನ ಮಗನೊಂದಿಗೆ ಜಗಳವಾಡುತ್ತಿದ್ದರಂತೆ. ಈ ಬಗ್ಗೆ ಈ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಭಾರತದ 'ಯೂಟ್ಯೂಬ್ ರಾಜಧಾನಿ' ಎಂದು ಕರೆಯುವ ಈ ಹಳ್ಳಿ ಯಾವುದು ಗೊತ್ತಾ? ಬರಿ ಯೂಟ್ಯೂಬ್ ನಿಂದಲೇ ಇಲ್ಲಿ ಹಣ ಹರಿಯುತ್ತದೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News