ಕೊಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ನಲ್ಲಿ ಬಂಗಾಳ ವಿರುದ್ಧ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ತನ್ನ ಎರಡನೇ ಇನಿಂಗ್ಸ್ ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ.
Stumps Day 3: Karnataka - 98/3 in 37.6 overs (Manish Pandey 11 off 32, Devdutt Padikkal 50 off 109) #BENvKAR @paytm #RanjiTrophy #SF2
— BCCI Domestic (@BCCIdomestic) March 2, 2020
ಇದಕ್ಕೂ ಮೊದಲು ಎರಡನೇ ಇನಿಂಗ್ಸ್ ಬ್ಯಾಟಿಂಗ್ ಮಾಡಿದ್ದ ಬಂಗಾಳ ತಂಡವು 161 ರನ್ ಗಳಿಗೆ ಆಲೌಟ್ ಆಗಿತ್ತು, ಕರ್ನಾಟಕದ ಪರವಾಗಿ ಅಭಿಮನ್ಯು ಮಿಥುನ್ ಅವರು 4 ವಿಕೆಟ್ ಗಳನ್ನು ಕಬಳಿಸುವ ಮೂಲಕ ಬಂಗಾಳ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಮೊತ್ತ 1 ಆಗಿದ್ದಾಗ ಕೆ.ಎಲ್.ರಾಹುಲ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು.
5⃣0⃣: Devdutt Padikkal brings up his half-century as Karnataka move closer to 100 against Bengal. 👌👌
Follow it live 👉👉 https://t.co/8vuWwOBGXI#BENvKAR #RanjiTrophy @paytm pic.twitter.com/5CaUfW61wn
— BCCI Domestic (@BCCIdomestic) March 2, 2020
ಇನ್ನೊಂದೆಡೆ ತಳವೂರುವ ಲಕ್ಷಣ ತೋರಿದ್ದ ರವಿಕುಮಾರ್ ಸಮರ್ಥ ಅವರು 27 ರನ್ ಗಳಿಸಿ ಹೊರನಡೆದರು. ಇದಾದ ನಂತರ ಬಂದಂತಹ ಕರುಣ್ ನಾಯರ್ ಕೂಡ ಕೇವಲ 6 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಈಗ ದೇವದತ್ತ ಪಡಿಕಲ್ ಅಜೇಯ 50 ರನ್ ಹಾಗೂ ಮನೀಶ್ ಪಾಂಡೆ 11 ರನ್ ಗಳಿಸುವ ಮೂಲಕ ಕ್ರಿಸ್ ನಲ್ಲಿದ್ದಾರೆ. ಕರ್ನಾಟಕ ತಂಡಕ್ಕೆ ಗೆಲ್ಲಲು ಇನ್ನೂ 254 ರನ್ ಗಳ ಅಗತ್ಯವಿದೆ. ಮೂರನೇ ದಿನದಾಂತ್ಯಕ್ಕೆ ಕರ್ನಾಟಕ ಈಗ 98 ರನ್ ಗಳಿಗೆ ಮೂರು ವಿಕೆಟ್ ಗಳನ್ನು ಕಳೆದುಕೊಂಡಿದೆ.